Slide
Slide
Slide
previous arrow
next arrow

ಸಂತೋಷ್ ನಾಯ್ಕ್ ಆತ್ಮಹತ್ಯೆ ಪ್ರಕರಣ: ಈರ್ವರು ಆರೋಪಿಗಳ ಬಂಧನ

300x250 AD

ಸಿದ್ದಾಪುರ: ತಾಲೂಕಿನ ಕಾಳೇನಳ್ಳಿ ಸಮೀಪ ಸೊರಬ ತಾಲೂಕಿನ ಚಿಕ್ಕ ತೌಡತ್ತಿಯ ಸಂತೋಷ ಗಣಪತಿ ನಾಯ್ಕನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಚನ್ನಮಾವಿನ ವಾಹನ ಚಾಲಕ ಹೇಮಂತ ಗಣಪತಿ ನಾಯ್ಕ ಹಾಗೂ ಅದೇ ಊರಿನ ಶಾಮಿಯಾನ ಕೆಲಸಮಾಡುವ ಶಿವಕುಮಾರ್ ನಾರಾಯಣ ನಾಯ್ಕ ಎನ್ನುವವರಾಗಿದ್ದಾರೆ.ಈ ಇಬ್ಬರು ಆರೋಪಿಗಳು ತಾಳಗುಪ್ಪದಿಂದ ರೈಲಿನ ಮೂಲಕ ಬೆಂಗಳೂರಿಗೆ ತೆರಳುವಾಗ ಬಂಧಿಸಲಾಗಿದೆ.

ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದು ಸಂತೋಷ ನಾಯ್ಕ ಆತ್ಮಹತ್ಯೆಗೂ ಮೊದಲು ಆಡಿಯೋ ಒಂದನ್ನು ಮಾಡಿ ಬಿಟ್ಟು ಕೆಲವು ಯುವಕರ ಹೆಸರನ್ನು ಹೇಳಿದ್ದರು. ಅಲ್ಲದೇ ತಾಲೂಕಿನ ಕೆಲ ಯುವಕರು ಹೈಸ್ಕೂಲು ಹೆಣ್ಣುಮಕ್ಕಳನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ. ಇದೇ ವಿಚಾರ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹಿಡಿಯಲು ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಿದ್ದು ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿರುವುದರಿಂದ ಅವರನ್ನು ಬಂಧಿಸಿ ಪ್ರಕರಣವನ್ನು ಸಂಪೂರ್ಣವಾಗಿ ಬೇಧಿಸಿದರೆ ಘಟನೆಯ ಸತ್ಯಾಸತ್ಯತೆ ತಿಳಿದುಬರಲಿದೆ.

300x250 AD
Share This
300x250 AD
300x250 AD
300x250 AD
Back to top