ಅಂಕೋಲಾ: ತಾಲೂಕಿನ ಹಳವಳ್ಳಿಯ ಮಾನ್ಯ ನರಸಿಂಹ ಹೆಗಡೆ ಇವಳು Gen-ews 2621 ರ಼್ಯಾಂಕ್ ಪಡೆದು ಐಐಟಿ ಬಾಂಬೆಗೆ ಮುಂದಿನ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾಳೆ.
ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಮೂಂಚೂಣಿಯಲ್ಲಿದ್ದ ಮಾನ್ಯ ತನ್ನ ಪ್ರಾಥಮಿಕ ಶಿಕ್ಷಣವನ್ನು ಹಳವಳ್ಳಿಯಲ್ಲಿ ಮುಗಿಸಿ ಜವಾಹರ್ ನವೋದಯ ಪಂಚವಟಿ ಮಳಗಿಯಲ್ಲಿ ಮುಂದಿನ ಶಿಕ್ಷಣ ಪಡೆದು, ದಕ್ಷಣಾ ಪೌಂಡೇಶನ್ ಪುಣೆಯಲ್ಲಿ ಜೆಇಇ ತರಬೇತಿ ಪಡೆದು ಉತ್ತಮ ಸಾಧನೆ ಮಾಡಿ ಊರಿಗೆ ,ತಾನು ಕಲಿತ ವಿದ್ಯಾಸಂಸ್ಥೆಗೆ ಹೆಮ್ಮೆ ತಂದಿದ್ದಾಳೆ. ತಂದೆ ಎನ್.ಆರ್. ಹೆಗಡೆ ಹಳವಳ್ಳಿ ತಾಯಿ ಮಮತಾ ಹೆಗಡೆ ಹಾಗೂ ಅವಳಿಗೆ ಶಿಕ್ಷಣ ನೀಡಿದ ಎಲ್ಲಾ ಶಿಕ್ಷಕರು ಅವಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದರು.ಬಾಂಬೆ ಐಐಟಿಗೆ ಆಯ್ಕೆಯಾದ ಹಳವಳ್ಳಿಯ ಮೊದಲಿಗಳು. ಇದು ಊರಿಗೆ ಹಮ್ಮೆಯ ತರುವ ವಿಚಾರ ಎಂದು ಗ್ರಾ,ಪಂ ಡೋಂಗ್ರಿ ಯ ಸದಸ್ಯರಾದ ನಿತ್ಯಾನಂದ ಭಟ್ಟ ಅಭಿನಂದಿಸಿದ್ದಾರೆ. ಹಾಗೇಯೆ ಊರವರು, ಬಂಧುಗಳು, ಹಳವಳ್ಳಿ ನಾಗರಿಕರು, ಸ್ನೇಹಿತರು ಅಭಿನಂದಿಸಿದ್ದಾರೆ.