Slide
Slide
Slide
previous arrow
next arrow

ಭಟ್ಕಳದಲ್ಲಿ ಗ್ರಾಮ ಆಡಳಿತಾಧಿಕಾರಿ ಘಟಕದಿಂದ ಶಾಂತಿಯುತ ಪ್ರತಿಭಟನೆ

300x250 AD

ಭಟ್ಕಳ: ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ರಾಜ್ಯ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ತಾಲೂಕಾ ಘಟಕದಿಂದ ಇಲ್ಲಿನ ಆಟೋ ರಿಕ್ಷಾ ಗಣೇಶೋತ್ಸವ ಮೈದಾನದಲ್ಲಿ ಗುರುವಾರದಂದು ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಿದರು.

ಈ ವೇಳೆ ಭಟ್ಕಳ ಘಟಕದ ಗೌರವಾಧ್ಯಕ್ಷ ಕೆ.ಶಂಭು ಮಾತನಾಡಿ ಸೆ.22ರಂದು ಚಿತ್ರದುರ್ಗದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕರ್ನಾಟಕ ರಾಜ್ಯದಲ್ಲಿ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳು ಅನುಭವಿಸುತ್ತಿರುವ ಕೆಲಸದ ಒತ್ತಡದವನ್ನು ಹೆಚ್ಚು ಹೆಚ್ಚು ನೀಡುತ್ತಿದ್ದಾರೆ. ಅದನ್ನು ಕಡಿಮೆಗೊಳಿಸಲು ನಾವು ಇಂದು ರಾಜ್ಯಾದ್ಯಂತ ಶಾಂತಿಯುತ ಮುಷ್ಕರ ನಡೆಸುತ್ತಿದ್ದೇವೆ. ಅದೇ ರೀತಿ ಭಟ್ಕಳದಲ್ಲಿಯೂ ಕೂಡ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಭಟ್ಕಳ ಸಂಘದ ಸದಸ್ಯರಾದ ಚಾನ್ ಬಾಷಾ ಮಾತನಾಡಿ ನಮ್ಮ ರಾಜ್ಯ ಸಂಘದಿಂದ ಈಗಾಗಲೇ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ ಇವರೊಂದಿಗೆ ನಮ್ಮ ಬೇಡಿಕೆ ಬಗ್ಗೆ ಚರ್ಚೆ ಮಾಡಲಾಗಿದ್ದು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ತಳಮಟ್ಟದ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಸಮಸ್ಯೆಗಳಿದ್ದು ಕೆಲವು ನೌಕರರು ಕೆಲಸದ ಒತ್ತಡದಿಂದ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಕಳೆದ 5-6 ವರ್ಷಗಳಿಂದ ಭಟ್ಕಳ ತಾಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗೆ ರಾಜ್ಯಾದ್ಯಂತ ಅನೇಕ ನೌಕರರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಕೆಲಸದ ಒತ್ತಡವಾಗಿದೆ. ಮೂಲತಃ ನಮ್ಮದು ತಾಂತ್ರಿಕ
ಹುದ್ದೆಯಲ್ಲ. ಆದರೆ ಒತ್ತಾಯ ಪೂರ್ವಕವಾಗಿ ತಾಂತ್ರಿಕ ಕೆಲಸವನ್ನು ಮೊಬೈಲ್ ಆಫ್ ಮೂಲಕ ಮಾಡುವಂತ ಒತ್ತಡವನ್ನು ನಿರಂತರವಾಗಿ ಹೇರಲಾಗುತ್ತಿದೆ. ಕನಿಷ್ಠ 21 ಮೊಬೈಲ್ ಆಫ್‌ಗಳ ಮೂಲಕ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅದನ್ನು ಸೆ.23 ರಿಂದ ಸ್ಥಗಿತಗೊಳಿಸುವುದರ ಬಗ್ಗೆ ಸರ್ಕಾರಕ್ಕೆ ರಾಜ್ಯ ಸಂಘದಿಂದ ಕೋರಿಕೊಂಡು ಅದರಂತೆ ಸ್ಥಗಿತಗೊಳಿಸಿದ್ದಾರೆ. ನಂತರ ಮುಂದಿನ ಹಂತವಾಗಿ ಇಂದಿನ ದಿನ ಎಲ್ಲಾ ತಾಲೂಕಾ ಮಟ್ಟದಲ್ಲಿ ಮುಷ್ಕರ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಸಂಘದಿಂದ ಯಾವ ರೀತಿ ನಿರ್ದೇಶನ ಬರುತ್ತದೆಯೋ ಅದರ ಆಧಾರದ ಮೇಲೆ ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಗ್ರಾಮ ಲೆಕ್ಕಿಗರಿಗೆ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟು ಇದೆ ಎಂದರು. ನಂತರ ಮುಷ್ಕರ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಮುಷ್ಕರ ನಿರತರಿಂದ ಮನವಿ ಸ್ವೀಕರಿಸಿದರು.

ಬಳಿಕ ಮುಷ್ಕರಕ್ಕೆ ಅನುಮತಿ ಇಲ್ಲದೆ ಇರುವುದರಿಂದ ಮುಷ್ಕರ ಕೈ ಬಿಡುವಂತೆ ಮುಷ್ಕರ ನಿರತರಿಗೆ ಹೇಳಿದರು. ಬಳಿಕ ತಹಶೀಲ್ದಾರಗೆ ಹೇಳಿದ ಮಾತಿಗೆ ಮನವಿ ನೀಡಿ ಮುಷ್ಕರವನ್ನು ಅಲ್ಲೇ ಕೈಬಿಟ್ಟರು.

300x250 AD

ಇದಕ್ಕೂ ಪೂರ್ವದಲ್ಲಿ ರಾಜ್ಯ ಮಾಹಿತಿ ಹಕ್ಕು ಭಟ್ಕಳ ಘಟಕದ ಸದಸ್ಯರು ಪ್ರತಿಭಟನೆ ಸ್ಥಳಕ್ಕೆ ಬಂದು ನಮಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಿದೆ ಪೊಲೀಸ ವಶಕ್ಕೆ ನೀಡಿದ್ದರು ಇವರಿಗೆ ಹೇಗೆ ಪ್ರತಿಭನೆ ನಡೆಸಲು ಅನುಮತಿ ನೀಡಲು ಅವಕಾಶ ನೀಡಿದ್ದೀರಾ ಎಂದು ಸ್ಥಳದಲ್ಲಿ ಬಂದೋಬಸ್ತ್ ನೀಡಿದ ಪೊಲೀಸ ಸಿಬ್ಬಂದಿಗಳಿಗೆ ಪ್ರಶ್ನೆ ಮಾಡಿದ ಸನ್ನಿವೇಶ ನಡೆಯಿತು.

ಈ ಸಂದರ್ಭದಲ್ಲಿ ಲತಾ ನಾಯ್ಕ, ಚರಣ ಗೌಡ, ಹೇಮಾ ನಾಯ್ಕ, ವಿನುತ, ಶ್ರುತಿ ದೇವಾಡಿಗ, ದೀಕ್ಷಿತ, ಗಣೇಶ , ದಿಪ್ತಿ, ದಿವ್ಯಾ, ವೀಣಾ, ಐಶ್ವರ್ಯ ಇದ್ದರು

Share This
300x250 AD
300x250 AD
300x250 AD
Back to top