Slide
Slide
Slide
previous arrow
next arrow

ಬಿಜೆಪಿ ಸದಸ್ಯತಾ ಅಭಿಯಾನಲ್ಲಿ ಸಂಸದ ಕಾಗೇರಿ ಭಾಗಿ

300x250 AD

ಬನವಾಸಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಬನವಾಸಿ ಜಿಲ್ಲಾ ಪಂಚಾಯತ್ ಭಾಗದ ವಿವಿಧೆಡೆ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮನೆ ಮನೆ ತೆರಳಿ ಬಿಜೆಪಿ ಸದಸ್ಯತ್ವ ಮಾಡಿಸುವುದರ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿಜೀ ಅವರ ವಿಕಸಿತ ಭಾರತ ಕಾರ್ಯಕ್ಕೆ ನಮ್ಮ ಕೊಡುಗೆಯನ್ನು ಹೆಚ್ಚು ಸದಸ್ಯತ್ವ ಮಾಡಿಸುವುದರ ಮೂಲಕ ತೋರಿಸಬೇಕು ಎಂದರು.

ಕಾರ್ಯಕ್ರಮದ ಮೊದಲು ಗುಡ್ನಾಪುರದ ಬಂಗಾರೇಶ್ವರ ದೇವಸ್ಥಾನ ಮಂಡಳಿಯವರು ಸನ್ಮಾನಿಸಿ ವಿವಿಧ ಬೇಡಿಕೆ ಸಲ್ಲಿಸಿದರು. ಅದರಂತೆ ಹಲವೆಡೆ ಸಾರ್ವಜನಿಕ ಸಂಘ ಸಂಸ್ಥೆಯ ಆಡಳಿತ ಕಮಿಟಿಯವರು ಸನ್ಮಾನಿಸಿ ವಿವಿಧ ಅಹವಾಲುಗಳನ್ನು ಸಂಸದರಿಗೆ ನೀಡಿದರು. ಗುಡ್ನಾಪುರ, ಮರಗುಂಡಿ, ಸುಗಾವಿ, ಉಂಚಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಮಂಡಲ ಅಧ್ಯಕ್ಷರಾದ ಶ್ರೀಮತಿ ಉಷಾ ಹೆಗಡೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ್ ನಾಯ್ಕ,ಶಕ್ತಿ ಕೇಂದ್ರ ಅಧ್ಯಕ್ಷರಾದ ಮಂಜುನಾಥ ನಾಯ್ಕ ಮಂಡಲ ಪ್ರಭಾರಿ ಅಶೋಕ್ ಚಲವಾದಿ, ಪ್ರಮುಖರಾದ ಗಣೇಶ ಸಣ್ಣ ಲಿಂಗಣ್ಣನವರ, ವಿಶ್ವನಾಥ ಹಾದಿಮನಿ ಅರವಿಂದ ಶೆಟ್ಟಿ, ಟಿ.ಜಿ ನಾಡಿಗೇರ . ಶಕ್ತಿ ಕೇಂದ್ರ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳು, ಬೂತ್ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top