Slide
Slide
Slide
previous arrow
next arrow

ನೆಲೆಮಾವಿನ ಮಠದಲ್ಲಿ ವಿಶ್ವನಾಯಕ ಮೋದಿ ಹೆಸರಲ್ಲಿ ವಿಶೇಷ ಪೂಜೆ

300x250 AD

ಶಿರಸಿ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತ ಬಿಜೆಪಿ‌ ವತಿಯಿಂಷ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀಲಕ್ಷ್ಮೀನರಸಿಂಹ ದೇವರಲ್ಲಿ ಮೋದಿಜೀ ಅವರಿಗೆ ಉತ್ತಮ ಆಯುರಾರೋಗ್ಯ ನೀಡುವಂತೆಯೂ, ತನ್ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಅನನ್ಯವಾದ ಕೊಡುಗೆ ಸಿಗುವಂತಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು.

ಮೋದಿಜೀ ಅವರು ತಮ್ಮ ಆಡಳಿತದಲ್ಲಿ ನವಭಾರತ ನಿರ್ಮಾಣಕ್ಕೆ ಅಹರ್ನಿಶ ದುಡಿಯುತ್ತಿದ್ದಾರೆ. ಜನಕಲ್ಯಾಣದ ಯೋಜನೆಗಳ ಮೂಲಕ ಸಮಾಜದ ಎಲ್ಲಾ ವರ್ಗಗಳ ಉನ್ನತೀಕರಣ ನರೇಂದ್ರ ಮೋದಿ ಜೀ ನೇತೃತ್ವದ ಎನ್.ಡಿ.ಎ ಸರ್ಕಾರದಿಂದ ಸಾಧ್ಯವಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು. ನೆಲೆಮಾವಿನ ಮಠದ ಮಂಗಲಧಾಮದಲ್ಲಿ ಅಣಲೇಬೈಲ್ ಶಕ್ತಿಕೇಂದ್ರದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಬಿಜೆಪಿಯ ಸದಸ್ಯತಾ ಅಭಿಯಾನ ಆರಂಭವಾಗಿದೆ, ಕಾರ್ಯಕರ್ತರ ಆಧಾರಿತವಾಗಿ ಮತ್ತು ಬೂತ್ ಕೇಂದ್ರಿತವಾಗಿ ನಮಗೆ ನೀಡಿದ ಗುರಿಯನ್ನು ತಲುಪಲು ಪ್ರತಿಯೊಬ್ಬರೂ ಸಮಯ ಮೀಸಲಿಡಿ ಎಂದು ಗುರುಪ್ರಸಾದ ಹೆಗಡೆ ಕರೆ ನೀಡಿದರು. ಪಕ್ಷದ ಸದಸ್ಯತ್ವ ಪಡೆಯುವ ವಿಧಾನ ಹಾಗೂ ಇತರರನ್ನೂ ಸದಸ್ಯರಾಗಿ ನೋಂದಾಯಿಸುವ ವಿಧಾನವನ್ನು ವಿವರಿಸಿದರು.

300x250 AD

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಹಗರಣಗಳ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜನರ ಕಷ್ಟಗಳಿಗೆ ಸ್ಪಂದಿಸದೇ, ಭ್ರಷ್ಟಾಚಾರ ಆರೋಪ ಹೊತ್ತರೂ ಉಡಾಫೆಯಿಂದ ಮತ್ತು ಬೇಜವಾಬ್ದಾರಿಯಿಂದ ಅಧಿಕಾರ ನಡೆಸುವ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೋಗಲಿ ಎಂಬುದು ಜನರ ಮನದ ಇಂಗಿತವಾಗಿದೆ ಎಂದರು.

ಶಕ್ತಿಕೇಂದ್ರ ಪ್ರಮುಖರಾದ ಶ್ರೀ ಬಾಲಚಂದ್ರ ಹೆಗಡೆ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಗೀತಾ ಪ್ರಶಾಂತ ಹೆಗಡೆ ಮೇಲ್ಗಿರಿ, ಚೆಲುವಯ್ಯ ಗೌಡ, ತಾ ಪಂ ಮಾಜಿ ಸದಸ್ಯರಾದ ಶ್ರೀ ರಘುಪತಿ ವಿ ಹೆಗಡೆ, ಪ್ರಮುಖರಾದ ಶ್ರೀ ಶ್ರೀಧರ ಹೆಗಡೆ ತ್ಯಾರಗಲ್, ವಿಶ್ವನಾಥ ಉಂಬಳಮನೆ, ಮಹೇಶ ಹೆಗಡೆ ಮುಕ್ರಮನೆ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top