Slide
Slide
Slide
previous arrow
next arrow

ವಂಚನೆಗೊಳಗಾಗಿದ್ದ ಶಿಕ್ಷಕಿಗೆ ಸಿಕ್ಕ ನ್ಯಾಯ

300x250 AD

ಯಲ್ಲಾಪುರ: ಭೂಮಿ ಕೊಡಿಸುವುದಾಗಿ ಹೇಳಿ ಶಿಕ್ಷಕಿಗೆ ವಂಚಿಸಿದ ಪ್ರಕರಣದಲ್ಲಿ ಕೊನೆಗೂ ಶಿಕ್ಷಕಿಗೆ ನ್ಯಾಯ ದೊರಕಿದೆ.

ತಾಲೂಕಿನ ಮಂಚಿಕೇರಿಯ ಶಿಕ್ಷಕಿ ರೇವತಿ ನಾಯಕ ಅವರಿಗೆ ಭೂಮಿ ಕೊಡಿಸುವುದಾಗಿ ಹೇಳಿದ ತಾರೀಮಕ್ಕಿಯ ಗೋಪಾಲಕೃಷ್ಣ ಭಟ್ಟ ಎಂಬಾತ 5 ಲಕ್ಷ ರೂ ಪಡೆದು, ಭೂಮಿ ಕೊಡಿಸದೇ ವಂಚಿಸಿದ್ದ. ಶಿಕ್ಷಕಿ ತನ್ನ ಹಣವನ್ನು ಮರಳಿ ಕೇಳಿದಾಗ ಆತ ನೀಡಿದ 3.70 ಲಕ್ಷ ರೂ ಚೆಕ್ ಕೂಡ ಬೌನ್ಸ್ ಆಗಿತ್ತು.
ಈ ಕುರಿತು ಶಿಕ್ಷಕಿ ಠಾಣೆಯ ಮೊರೆ ಹೋಗಿದ್ದರು. ಮಂಗಳವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ 5 ಲಕ್ಷ ರೂ ಹಣವನ್ನು ಶಿಕ್ಷಕಿ ರೇವತಿ ಅವರಿಗೆ ಗೋಪಾಲಕೃಷ್ಣ ಭಟ್ಟ ಮರಳಿಸಿದ್ದಾರೆ‌. ಭೂಮಿ ವಿಚಾರಕ್ಕೆ ಮಾಡಿಕೊಂಡಿದ್ದ ಕರಾರು ಪತ್ರವನ್ನು ಹಾಗೂ ಚೆಕ್‌ನ್ನು ಶಿಕ್ಷಕಿ ಮರಳಿಸಿದ್ದಾರೆ.
ಈ ಮೂಲಕ ಅನ್ಯಾಯಕ್ಕೊಳಗಾಗಿದ್ದ ಶಿಕ್ಷಕಿಗೆ ನ್ಯಾಯ ದೊರಕಿದೆ. ವಂಚನೆ ಪ್ರಕರಣ ಸುಖಾಂತ್ಯ ಕಂಡಿದೆ.

300x250 AD
Share This
300x250 AD
300x250 AD
300x250 AD
Back to top