Slide
Slide
Slide
previous arrow
next arrow

ಉತ್ತರಾಖಂಡ್ ಹಿಮಪಾತ ದುರಂತ: ಶಿರಸಿಯ ಪದ್ಮಿನಿ ನಾಪತ್ತೆ

300x250 AD

ಶಿರಸಿ: ಉತ್ತರಾಖಂಡದಲ್ಲಿ ಸಂಭವಿಸಿದ ಹಿಮಪಾತದಿಂದಾಗಿ ಚಾರಣಿಗರು ನಾಪತ್ತೆಯಾಗಿದ್ದು  ಶಿರಸಿ ತಾಲೂಕಿನ ಜಾಗ್ನಳ್ಳಿಯ ಯುವತಿ ಪದ್ಮಿನಿ ಎಂಬುವವರೂ ಸಹ ನಾಪತ್ತೆಯಾಗಿರುವುದರ ಬಗ್ಗೆ ಮಾಹಿತಿಲಭ್ಯವಾಗಿದೆ.

ಟ್ರೆಕ್ಕಿಂಗ್ ಗೈಡ್‌ಗಳಾಗಿ ಉತ್ತರ ಕಾಶಿಯ ಮೂವರು ನಿವಾಸಿಗಳ ಜತೆ ಬೆಂಗಳೂರು, ಪುಣೆಯಿಂದ ಚಾರಣಿಗರು ತೆರಳಿದ್ದು, ಇವರೊಂದಿಗೆ ಜಾಗ್ನಳ್ಳಿ ಮೂಲದ ಬೆಂಗಳೂರು ನಿವಾಸಿ ಪದ್ಮಿನಿ ಹೆಗಡೆ (35) ಅವರು ಕೂಡ ತೆರಳಿದ್ದರು.ಮೇ.29ರಿಂದ ಜೂನ್ 7ರವರೆಗೆ ಭಟವಾಡಿ ಮಲ್ಲಾ ಸಿಲ್ಲಾ ಕುಶಕಲ್ಯಾಣ ಸಹಸ್ರತಾಲ್ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದ ತಂಡದೊಂದಿಗೆ ಪದ್ಮಿನಿ ತೆರಳಿದ್ದರು.

300x250 AD

ಜೂ. 4ರಂದು ಮಧ್ಯಾಹ್ನದ ಸಮಯಕ್ಕೆ ಹವಾಮಾನ ಸರಿಯಾಗಿಲ್ಲ ಎನ್ನುವುದಾಗಿ ಪದ್ಮನಿ ಅವರು ತಮ್ಮ ತಾಯಿಗೆ ಮೆಸೆಜ್ ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬಸ್ಥರು, ಪದ್ಮಿನಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ನಮಗಿದೆ. ಅವರಿಗೆ ಯಾವುದೇ ಅವಘಡ ಆಗಿದೆ ಎನ್ನುವುದಾಗಿ ನಮಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎಂದಿದ್ದಾರೆ.

Share This
300x250 AD
300x250 AD
300x250 AD
Back to top