Slide
Slide
Slide
previous arrow
next arrow

ಟಿಎಸ್ಎಸ್‌ಗೆ ಡಾ. ತೇಜಸ್ವಿನಿ ಅನಂತಕುಮಾರ ಭೇಟಿ

300x250 AD

ಶಿರಸಿ: ಇಲ್ಲಿನ ಟಿ.ಎಸ್.ಎಸ್. ಲಿ. ಶಿರಸಿ ಪ್ರಧಾನ ಕಛೇರಿ ಸುಪರ್ ಮಾರ್ಕೆಟಿನಲ್ಲಿ ನಡೆಯುತ್ತಿರುವ ಮಾನ್ಸೂನ್ ಮೇಳದ ಐದನೇ ದಿನದ ಕಾರ‍್ಯಕ್ರಮಕ್ಕೆ ಅದಮ್ಯ ಚೇತನ ಫೌಂಡೇಷನ್ ಸಂಸ್ಥಾಪಕರು, ಅಧ್ಯಕ್ಷರು, ಶ್ರೀ ಶಂಕರ ಕ್ಯಾನ್ಸರ್ ಪೌಂಡೆಷೇನ್‌ನ ಟ್ರಸ್ಟಿ ಹಾಗೂ ರಾಜ್ಯ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆಯಾದ ಡಾ. ತೇಜಸ್ವಿನಿ ಅನಂತಕುಮಾರ ಆಗಮಿಸಿದ್ದರು. ಸಂಸ್ಥೆ ಆಯೋಜಿಸಿದಂತೆ ಪ್ರತಿನಿತ್ಯ ರೂ. 500/- ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳ ಖರೀದಿಯ ಲಕ್ಕಿ ಡಿಪ್ ವಿಜೇತರನ್ನ ಚೀಟಿ ಎತ್ತುವ ಮೂಲಕ ಘೋಷಿಸಲಾಯಿತು. ದಿನಾಂಕ: 31/05/2024 ರಂದು ಖರೀದಿಸಿದ ಗ್ರಾಹಕರಲ್ಲಿ ಪ್ರಥಮ ಬಹುಮಾನ ಬಸವರಾಜ ವೀರಬಸಪ್ಪ ಪಾಗದ ಡೊಂಬೆಸರ, ದ್ವಿತೀಯ ಬಹುಮಾನ ಕೃಷ್ಣ ಚೌಡ ಹಸಲರ ಕಾನಸೂರ ಹುಣಸೆಕೊಪ್ಪ, ತೃತೀಯ ಬಹುಮಾನ ಗಣಪತಿ ಪ್ರಭಾಕರ ಹೆಗಡೆ ತಟ್ಟಿಕೈ ಕೆರೆಗದ್ದೆ ವಿಜೇತರಾದರು. ಆಮಂತ್ರಿತರನ್ನು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪುಷ್ಪಗುಚ್ಚ ನೀಡುವುದರ ಮೂಲಕ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಎನ್.ಭಟ್ಟ ತೋಟಿಮನೆ, ನಿರ್ದೇಶಕರು, ಖ್ಯಾತ ಬರಹಗಾರ ಶಿವಾನಂದ ಕಳವೆ, ಸದಸ್ಯರು, ಗ್ರಾಹಕರು ಹಾಗೂ ಸಂಘದ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top