Slide
Slide
Slide
previous arrow
next arrow

ಸಾವಗದ್ದೆ ಬಳಿ ಹೆಣ್ಣು ಚಿರತೆ ಅಸಹಜ ಸಾವು: ಅಧಿಕಾರಿಗಳಿಂದ ತನಿಖೆ

300x250 AD

ಯಲ್ಲಾಪುರ: ತಾಲೂಕಿನ ಬಿಸಗೋಡ್ ಗಸ್ತಿನ, ಆನಗೋಡದಿಂದ ಸಾವಗದ್ದೆಗೆ ಹೋಗುವ ರಸ್ತೆಯ ಬಲಬದಿಯಲ್ಲಿ ಬುಧವಾರ ಅಸಹಜವಾಗಿ ಹೆಣ್ಣು ಚಿರತೆಯೊಂದು ಮೃತ ಪಟ್ಟಿದ್ದು, ಮಾಹಿತಿ ಬಂದ ತಕ್ಷಣ ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಸ್.ಜಿ.ಹೆಗಡೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಹೆಚ್.ಎ ವಲಯ ಅರಣ್ಯಾಧಿಕಾರಿ ಎಲ್.ಎ ಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಿಯಮಾನುಸಾರ ಸದರಿ ಚಿರತೆಯ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಶು ಆಸ್ಪತ್ರೆ ಯಲ್ಲಾಪುರಕ್ಕೆ ತರಲಾಯಿತು. ಅಸಹಜ ಚಿರತೆಯ ಸಾವಿಗೆ1972 ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ವಲಯ ಅರಣ್ಯಾಧಿಕಾರಿ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ನ್ಯಾಯಾಧೀಶರು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಫೀರ್ಯಾಧಿ ಸಲ್ಲಿಸಿರುತ್ತಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಯಲ್ಲಾಪುರರವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಹೆಚ್ಚಿನ ತನಿಖೆ ಕೈ ಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top