ಭಟ್ಕಳ : ತಾಲೂಕಿನ ಬೆಳಕೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ವ್ಯಕ್ತಿಯೋರ್ವರ ಖಾತೆಯಲ್ಲಿದ್ದ 20 ಲಕ್ಷ ರೂಪಾಯಿ ಸೈಬರ್ ವಂಚಕರ ಪಾಲಾಗಿದೆ.
ಬೆಳಕೆಯ ಜಗದೀಶ ಲಚ್ಚಯ್ಯ ನಾಯ್ಕ ಹಣ ಕಳೆದುಕೊಂಡವರು. ಇವರು ಕೆನರಾ ಬ್ಯಾಂಕಿನ ಬೆಳಕೆ ಶಾಖೆಯಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಯಾರೋ ಆರೋಪಿತರು ಫೆಬ್ರವರಿ ೮ ರಿಂದ ೯ರ ಬೆಳಗ್ಗೆ ೮.೨೦ ಗಂಟೆಯ ವರೆಗೆ ಇವರ ಖಾತೆಯಲ್ಲಿದ್ದ ಒಟ್ಟೂ ೨೦೨೧೪೫೨ ರೂಪಾಯಿ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿ ಆನ್ಲೈನ್ ವಂಚನೆ ಮಾಡಿದ್ದಾರೆ.
ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ವಂಚನೆಗೊಳಗಾದ ಜಗದೀಶ ನಾಯ್ಕ ದೂರು ದಾಖಲಿಸಿದ್ದಾರೆ.