Slide
Slide
Slide
previous arrow
next arrow

ದುಷ್ಕರ್ಮಿಗಳಿಂದ ಗೋ ವಧೆ: ದೂರು‌ ದಾಖಲು

300x250 AD

ಭಟ್ಕಳ : ದುಷ್ಕರ್ಮಿಗಳು ಗೋವನ್ನು ವಧೆ ಮಾಡಿ ತಲೆ ಮತ್ತು ಚರ್ಮವನ್ನು ಬಿಟ್ಟು ಮಾಂಸ ಸಾಗಾಟ ಮಾಡಿಕೊಂಡು ಹೋಗಿರುವ ಘಟನೆ ನಗರದ ಆಸರಕೇರಿ ಸಮೀಪ ಪಾಳು ಬಿದ್ದ ಮನೆಯೊಂದರ ಬಳಿ ನಡೆದಿದೆ.

ಬುಧವಾರ ರಾತ್ರಿ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಎಲ್ಲಿಂದಲೋ ಜಾನುವಾರುವನ್ನು ತಂದು ಈ ಸ್ಥಳದಲ್ಲಿ ವಧೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

300x250 AD

ಸ್ಥಳದಲ್ಲಿ ವಧೆ ಮಾಡಿದ ಜಾನುವಾರಿನ ರುಂಡ, ಚರ್ಮ, ಕಾಲು ಹಾಗೂ ಕರಳಿನ ಅವಶೇಷಗಳು ಪತ್ತೆಯಾಗಿವೆ. ಸ್ಥಳಕ್ಕೆ ಪಶು ವೈದ್ಯರು ಹಾಗೂ ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top