Slide
Slide
Slide
previous arrow
next arrow

ಎಡಿಜಿಪಿ ಎಂ.ಚಂದ್ರಶೇಖರ್ ಅಮಾನತಿಗೆ ಆಗ್ರಹಿಸಿ ಜೆಡಿಎಸ್‌ನಿಂಷ ಮನವಿ ಸಲ್ಲಿಕೆ

300x250 AD

ಭಟ್ಕಳ : ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ರವರನ್ನು ಕೂಡಲೇ ಭಾರತಿಯ ಸೇವೆಯಿಂದ ಅಮಾನತುಗೊಳಿಸಿ
ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಾತ್ಯಾತೀತ ಜನತಾ ದಳ ಭಟ್ಕಳ ಘಟಕದವತಿಯಿಂದ ಸಹಾಯ ಆಯುಕ್ತರ ಮೂಲಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತ ವಿಶೇಷ ತನಿಖಾ ಮುಖ್ಯಸ್ಥ ಎಡಿಜಿಪಿ ಆಗಿ ಕಾರ್ಯನಿರ್ವಸುತ್ತಿರುವ ಎಂ. ಚಂದ್ರಶೇಖರ್ ಇವರ ಭ್ರಷ್ಟಚಾರ ಸುಲಿಗೆ, ದುರ್ನಡತೆ ಮುಂತಾದ ಕ್ರಿಮಿನಲ್ ಕೇಸಗಳಲ್ಲಿ ಭಾಗಿಯಾಗಿರುವರನ್ನು ಅಮಾನತುಗೊಳಿಸಿ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಪಕ್ಷ ಭಟ್ಕಳ ಘಟಕ ಆಗ್ರಹಸಿದೆ

ಈಗಾಗಲೇ 30-09-2024 ರಂದು ಕರ್ನಾಟಕ ಜನತಾದಳ ಜಾತ್ಯತೀತ ಪಕ್ಷದ ಶಾಸಕಾಂಗ ನಾಯಕರಾದ ಸುರೇಶ ಬಾಬು ಸಿ.ಬಿ.ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರಕಾರ ವಿಧಾನ ಸೌಧ ಇವರಿಗೆ ಪತ್ರ ಬರೆದು ಈ ಭ್ರಷ್ಟ ಅಧಿಕಾರಿಯ ಚಾರಿತ್ಯೆಯನ್ನು ವಿವರವಾಗಿ ತಿಳಿಸಿರುತ್ತಾರೆ. ಈ ಎಲ್ಲಾ ಅಂಶಗಳನ್ನ ಮನಗಂಡು ಭ್ರಷ್ಟ ಅಧಿಕಾರಿಯ ಕಾರ್ಯವೈಖರಿಯನ್ನು ಜೆಡಿಎಸ್ ಪಕ್ಷ ಭಟ್ಕಳ ಘಟಕ ಖಂಡಿಸುತ್ತದೆ ಮತ್ತು ಅವರ ವಿರುದ್ಧ ಕ್ರಮ ಜರುಗಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಕ್ತ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಶಿಫಾರಸ್ಸಿನೊಂದಿಗೆ ಕಳುಹಿಸಲು ಮನವಿಯಲ್ಲಿ ಉಲ್ಲೇಖಿಸಿದ್ದಾರೆ

300x250 AD

ಮನವಿ ಬಳಿಕ ಭಟ್ಕಳ ಘಟಕದ ಜೆಡಿಎಸ್ ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ ನಮ್ಮ ಜೆಡಿಎಸ್ ನಾಯಕ ಕುಮಾರಸ್ವಾಮಿಯವರಿಗೆ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ಅವಹೇಳನಕಾರಿ ಶಬ್ದ ಉಪಯೋಗಿಸಿ ಮಾತನಾಡಿರುವುದನ್ನು ಭಟ್ಕಳ ಘಟಕದಿಂದ ಖಂಡಿಸುತ್ತೇವೆ ಎಂದರು.

ನಂತರ ಜೆಡಿಎಸ್ ಮುಖಂಡ ಪಾಂಡು ನಾಯ್ಕ ಮಾತನಾಡಿ ಕುಮಾರ ಸ್ವಾಮಿಯವರಿಗೆ ಅವಹೇಳನಕಾರಿ ಶಬ್ದದಿಂದ (ಹಂದಿ) ಎಂದು ಉಲ್ಲೇಖ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ ವಿರುದ್ಧ ಭಟ್ಕಳ ಜೆಡಿಎಸ್ ಘಟಕದವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ನೀಡಿದ್ದೇವೆ. ಅವರ ಹೇಳಿಕೆಯನ್ನು ಭಟ್ಕಳ ಜೆಡಿಎಸ್ ಘಟಕ ಉಗ್ರವಾಗಿ ಖಂಡಿಸುತ್ತದೆ ಹಾಗೂ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು. ಕುಮಾರಸ್ವಾಮಿ ಉನ್ನತ ಹುದ್ದೆಯಲ್ಲಿದ್ದು ಇಂತಹವರ ವಿರುದ್ಧ ನೀಚ ಹೇಳಿಕೆ ನೀಡಿರುವ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top