Slide
Slide
Slide
previous arrow
next arrow

ಮಹಿಳೆಯ ಚಿನ್ನ ಕದ್ದ ಹೋಂ ಗಾರ್ಡ್

300x250 AD

ಕಾರವಾರ: ಅಸ್ನೋಟಿಯ ಭಗತವಾಡದಲ್ಲಿರುವ ರೇಷ್ಮಾ ಪ್ರಕಾಶ ತಳ್ಳೇಕರ್ ಎಂಬಾತರ ಮನೆಗೆ ನುಗ್ಗಿದ ಶ್ರೀಧರ ಕೃಷ್ಣಾ ಕಾಣಕೋಣಕರ ಎಂಬಾತ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಆ.30ರಂದು ರಾತ್ರಿ ರೇಷ್ಮಾ ಮನೆಯಿಂದ ಹೊರಗಿದ್ದರು. ಆ ವೇಳೆ ಅವರ ಮನೆಯೊಳಗೆ ನುಗ್ಗಿದ ಶ್ರೀಧರ್ ಕಪಾಟು ತೆಗೆದು ಅಲ್ಲಿದ್ದ 15 ಗ್ರಾಂ. ತೂಕದ ಚಿನ್ನದ ಸರ, 20 ಗ್ರಾಂ. ತೂಕದ ಚಿನ್ನದ ಬಳೆ ಜೊತೆ 2 ಸಾವಿರ ರೂ.ನಗದು ಹಣ ದೋಚಿದ್ದಾನೆ. ರೇಷ್ಮಾ ಮನೆಗೆ ವಾಪಾಸ್ ಬಂದಿರುವುದನ್ನು ನೋಡಿ ಆತ ಅಲ್ಲಿಂದ ಓಡಿ ಪರಾರಿಯಾಗಿದ್ದು, ಕಳ್ಳತನ ನಡೆಸಿರುವುದು ಆತನೇ ಎಂದು ಖಚಿತಪಡಿಸಿಕೊಂಡ ನಂತರ ಅವರು ಪೊಲೀಸ್ ದೂರು ನೀಡಿದ್ದಾರೆ.

300x250 AD

ಆರೋಪಿ ಶ್ರೀಧರ ಕೃಷ್ಣಾ ಕಾಣಕೋಣಕರ ಸಹ ಅದೇ ಊರಿನವನಾಗಿದ್ದು, ಹೋಂ ಗಾರ್ಡ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ‌ ಎಂದು ತಿಳಿದುಬಂದಿದೆ.

Share This
300x250 AD
300x250 AD
300x250 AD
Back to top