Slide
Slide
Slide
previous arrow
next arrow

ಕಾಡುಮನೆ ಹನಿಪಾರ್ಕ್‌ಗೆ ಆರ್‌ವಿ‌ಡಿ ಭೇಟಿ

300x250 AD

ಜೊಯಿಡಾ: ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಶಾಸಕರೂ ಆಗಿರುವ ಆರ್.ವಿ.ದೇಶಪಾಂಡೆ ಜೊಯಿಡಾದ ಹನಿ ಪಾರ್ಕ್‌ಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಹನಿಪಾರ್ಕ್‌ನ ವಿವಿಧ ಹಂತದ ಜೇನು ಕೃಷಿಯನ್ನು ಕಂಡು ಅತ್ಯಂತ ಸಂತಸಗೊಂಡರು. ಕಾಡುಮನೆ ಹನಿ ಪಾರ್ಕ್‌ನ ನರಸಿಂಹ ಚಾಪಖಂಡರೊಂದಿಗೆ ಜೇನು ಕೃಷಿಯ ಕುರಿತು ಮಾತನಾಡಿ ಜೇನು ಹುಳಗಳನ್ನು ಸ್ಪರ್ಶಿಸಿ ಇದೊಂದು ಅದ್ಭುತ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ದೇಶಪಾಂಡೆ ಜೇನು ಕೃಷಿಯನ್ನು ವಿದ್ಯಾರ್ಥಿ ದೇಶೆಯಿಂದಲೇ ಮಕ್ಕಳಿಗೆ ಪಾಠ ಮಾಡಿದರೆ ಜೇನು ಕೃಷಿಯ ಜೊತೆಗೆ ಇತರ ಕೃಷಿಗಳೂ ಉತ್ತಮವಾಗಿ ಬೆಳೆಯುತ್ತವೆ. ಜೇನಿಲ್ಲದೆ ಏನು ಇಲ್ಲ ಎಂದು ಹೇಳಿ ಇಕೋ ಟೂರಿಸಂ ದೃಷ್ಟಿಯಿಂದ ಈ ತರದ ಕಾರ್ಯಗಳು ಶ್ಲಾಗನೀಯ ಇದನ್ನು ಮುಂದುವರೆಸಿ, ರಾಜ್ಯದಲ್ಲಿ ಇದೊಂದು ಅದ್ಭುತ ಕೆಲಸ ಎಂದರು.

300x250 AD

ಈ ಸಂದರ್ಭದಲ್ಲಿ ಶಾಸಕರ ಎದುರಿನಲ್ಲಿಯೇ ಜೇನು ತುಪ್ಪವನ್ನು ತೆಗೆದು ಸವಿಯಲು ನೀಡಲಾಯಿತು. ಖಾಸಗಿ ಕಾರ್ಯಕ್ರಮದ ನಿಮಿತ್ತ ಬಂದ ಶಾಸಕರ ಜೊತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ ಇದ್ದರು

Share This
300x250 AD
300x250 AD
300x250 AD
Back to top