Slide
Slide
Slide
previous arrow
next arrow

ಸ್ಕೂಟರ್ ಕದ್ದ ಕಳ್ಳರ ಬಂಧನ

300x250 AD

ಹೊನ್ನಾವರ: ನಗರದ ಅಸೂರ್‌ಖಾನ್‌ಗಲ್ಲಿಯಲ್ಲಿ ಕಳ್ಳತನವಾಗಿದ್ದ ಸ್ಕೂಟರ್‌ನ್ನು ಆರೋಪಿಗಳ ಸಮೇತ ವಶಕ್ಕೆ ಪಡೆಯುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಇಲ್ಲಿನ ಇಸ್ಮಾಯಿಲ್ ಎಂಬಾತನು ತನ್ನ ಸ್ಕೂಟರ್ ಕಳುವಾಗಿದ್ದರ ಬಗ್ಗೆ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದಿದ್ದ ಪೋಲಿಸರು ಆರೋಪಿಗಳಾದ ಖದಿಉಜಮಾ ಹಾಗೂ ಸಯ್ಯದ್ ಸನಾನ್ ಎಂಬುವವರನ್ನು ಬಂಧಿಸಿ ಸ್ಕೂಟರ್‌ನ್ನು ವಶಕ್ಕೆ ಪಡೆದುಕೊಂಡಿದ್ದು ಜೊತೆಗೆ ಮತ್ತೆರಡು ಸ್ಕೂಟರ್‌ಗಳನ್ನೂ ವಶಕ್ಕೆ ಪಡೆದಿದ್ದಾರೆ.

300x250 AD

ಪೋಲಿಸ್ ಅಧೀಕ್ಷಕ ವಿಷ್ಣುವರ್ಧನ್, ಜಯಕುಮಾರ್, ಜಗದೀಶ್ ಎಮ್,ಮಹೇಶ್ ಎಮ್.ಕೆ. ಮಾರ್ಗದರ್ಶನದಲ್ಲಿ ಸುರೇಶ್ ಜಿ.ಕುಂಬಾರ್ ನೇತೃತ್ವದಲ್ಲಿ ಪಿಎಸ್‌ಐ ರಾಜಶೇಖರ ವಂದಲಿ, ಸಂತೋಷಕುಮಾರ್, ಶ್ರೀಮತಿ ಸಂಗೀತಾ, ಶಿವಾನಂದ ನಾವಲಗಿ ಹಾಗೂ ಸಿಬ್ಬಂದಿಗಳಾದ ಉದಯ ಹರಿಕಂತ್ರ, ಗಜಾನನ ನಾಯ್ಕ್, ರವಿ ನಾಯ್ಕ್ ,ಪಿಂಟೋ,ದಿನೇಶ ನಾಯ್ಕ್, ಮಹಾಂತೇಶ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top