Slide
Slide
Slide
previous arrow
next arrow

ಜಿಲ್ಲಾಮಟ್ಟದ ಚರ್ಚಾಸ್ಪರ್ಧೆ: ಕುಮಟಾದ ಯೋಗೇಶ ಪ್ರಥಮ

300x250 AD

ಕುಮಟಾ: ಸ್ಥಳೀಯ ಪ್ರತಿಷ್ಠಿತ ಕೆನರಾ ಕಾಲೇಜು ಸೊಸೈಟಿ ಅಧೀನದ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಸಂಸ್ಥೆಯ ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಯೋಗೇಶ ದಾಮೋದರ ಪಟಗಾರ ಕೆನರಾ ವೆಲ್‌ಫೇರ್ ಟ್ರಸ್ಟನ ಗೋಖಲೆ ಸೆಂಟನರಿ ಕಾಲೇಜು ಅಂಕೋಲಾದಲ್ಲಿ ನಡೆದ ಪಿ.ಎಸ್. ಕಾಮತ್ ಮೆಮೋರಿಯಲ್‌ನ 10ನೇ ಜಿಲ್ಲಾಮಟ್ಟದ ಅಂತರ್ ಕಾಲೇಜು ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ರೂ. 50000/- ನಗದು ಬಹುಮಾನ ಪಡೆದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗಾಗಿ ಕೆನರಾ ಕಾಲೇಜು ಸೊಸೈಟಿ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಚಂದ್ರ ಆರ್. ಕಾಮತ್, ಉಪಾಧ್ಯಕ್ಷರಾದ ದಿನಕರ ಎಮ್. ಕಾಮತ್, ಕಾರ್ಯಾಧ್ಯಕ್ಷರಾದ ಹನುಮಂತ ಕೆ. ಶಾನಭಾಗ, ಕಾರ್ಯದರ್ಶಿಗಳಾದ ಯಶ್ವಂತ ವಿ. ಶಾನಭಾಗ ಮತ್ತು ಆಡಳಿತಮಂಡಳಿ ಸದಸ್ಯರು, ಕೌನ್ಸಿಲ್ ಸದಸ್ಯರು ಹಾಗೂ ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top