Slide
Slide
Slide
previous arrow
next arrow

ಇಂದು ದಾಂಡೇಲಿಯಲ್ಲಿ ಸೌಹಾರ್ದತೆಗಾಗಿ ಮಾನವ ಸರಪಳಿ

300x250 AD

ದಾಂಡೇಲಿ : ನಾಡಿನ ಸೌಹಾರ್ದತೆಯಲ್ಲಿ ನಂಬಿಕೆಯಿಟ್ಟ ಎಲ್ಲಾ ಸಮಾನ ಮನಸ್ಸಿನ ಸಂಘಟನೆಗಳ ವೇದಿಕೆ “ಸೌಹಾರ್ದ ಕರ್ನಾಟಕ” ದ ಕರೆಯ ಮೇರೆಗೆ ಮಹಾತ್ಮಗಾಂಧೀಜಿಯವರ ಹುತಾತ್ಮ ದಿನವಾದ ಜನವರಿ 30 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಸೋಮಾನಿ ವೃತ್ತದಲ್ಲಿ ಸೌಹಾರ್ದತೆಗಾಗಿ ಕೈಜೋಡಿಸುವ ಅಭಿಯಾನದ ನಿಮಿತ್ತ ಸೌಹಾರ್ದತಾ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಈ ಕಾರ್ಯಕ್ರಮದಲ್ಲಿ ಗಾಂಧಿಜೀಯವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ನಂತರ ಮಾನವಸರಪಳಿ ರಚಿಸಿ ಸಂವಿಧಾನ ಆಶಯಗಳ ಪ್ರತಿಜ್ಞಾವಿಧಿ ಸ್ವೀಕರಿಸಲಾಗುವುದು. ಜನತೆಯ ನಡುವೆ ಸೌಹಾರ್ದ ಸಂದೇಶವನ್ನು ಬಲಪಡಿಸುವ, ಸಂವಿಧಾನದ ಆಶಯದಂತೆ ದೇಶದ ಏಕತೆ, ಸಮಾನತೆ, ಬಂಧುತ್ವ, ಸಾರ್ವಭೌಮತ್ವವನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ನಗರದ ಪ್ರಜ್ಞಾವಂತ ನಾಗರಿಕರು, ಸಾಹಿತಿಗಳು, ಕಲಾವಿದರು, ಬರಹಗಾರರು, ಜನಪರ ಸಂಘಟನೆಗಳು ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕ ಹಾಗೂ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ಡಿ.ಸ್ಯಾಮಸನ್ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top