Slide
Slide
Slide
previous arrow
next arrow

ರಸ್ತೆ ಸಂಪರ್ಕ ಸರಿಪಡಿಸುವಂತೆ ಗೋವಾ ಅರಣ್ಯ ಸಚಿವರಿಗೆ ಮನವಿ ಸಲ್ಲಿಕೆ

300x250 AD

ಜೋಯಿಡಾ : ಗೋವಾ ರಾಜ್ಯದ ರಾಜಧಾನಿ ಪಣಜಿಯ ಅರಣ್ಯ ಇಲಾಖೆಯ ಮುಖ್ಯ ಕಚೇರಿಯಲ್ಲಿ ಗೋವಾ ರಾಜ್ಯದ ಸಭಾಧ್ಯಕ್ಷರಾದ ರಮೇಶ ತವಡ್ಕರ್ ನೇತೃತ್ವದಲ್ಲಿ ಜೋಯಿಡಾ ತಾಲೂಕಿನ ಗೌವಳಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಗೋವಾ ರಾಜ್ಯದ ಅರಣ್ಯ ಸಚಿವರಾದ ವಿಶ್ವಜಿತ್ ರಾಣೆ ಇವರಿಗೆ ಗೋವಾ ಧಾರಗಿಣಿ – ಜುನಾ – ಗೌವಳಾದೇವಿ ರಸ್ತೆ ಸುಧಾರಣೆ ಮಾಡಿ ಕೊಡಬೇಕೆಂದು ಮನವಿ ನೀಡಲಾಯಿತು.

ಇದಕ್ಕೆ ಸ್ಪಂದಿಸಿದ ಸಚಿವರು ಡಿಸೆಂಬರ್ 25ರ ಒಳಗಾಗಿ ರಸ್ತೆ ಸರಿಪಡಿಸಿ ಕೊಡುತ್ತೇನೆಂದು ಭರವಸೆ ನೀಡಿದರು ಹಾಗೂ ಗಡಿ ಭಾಗದಲ್ಲಿರುವ ಜನರಿಗೆ ಗೋವಾ ಅರಣ್ಯ ಇಲಾಖೆಯಿಂದ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದರು.

300x250 AD

ಈ ಸಂದರ್ಭದಲ್ಲಿ ಗವಳಾದೇವಿ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಮಹಾದೇವ್ ಮಿರಾಶಿ, ತಾಲೂಕಾ ಕುಣಬಿ ಸಮಾಜ ಅಧ್ಯಕ್ಷ ಅಜಿತ್ ಮಿರಾಶಿ, ಬಜಾರಕುಣಂಗ್ ಗ್ರಾಮ ಪಂಚಾಯತ ಉಪಾಧ್ಯಕ್ಷ ಸದಾನಂದ ಸಾವಂತ್, ರಾಮನಗರ ಗ್ರಾಮ ಪಂಚಾಯತ ಅಧ್ಯಕ್ಷ ಶಿವಾಜಿ ಗೊಸಾವಿ, ಅಶೋಕ್ ಮಿರಾಶಿ ಸುರೇಶ ಮಿರಾಶಿ, ಸಂತೋಷ ವೇಳಿಪ್, ಸುದೇಶ್ ಮಿರಾಶಿ ಗಿರೀಶ ಗೋಸಾವಿ, ಕಾಶಿನಾಥ ಮಿರಾಶೀ, ಈಶ್ವರ್ ಮಿರಾಶಿ ಆಕಾಶ ಸಾವಂತ್ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top