Slide
Slide
Slide
previous arrow
next arrow

ಉದಯನಿಧಿ ಸ್ಟಾಲಿನ್ ವಿರುದ್ಧ ಕಾರವಾರದಲ್ಲಿ ದೂರು

300x250 AD

ಕಾರವಾರ: ಸನಾತನ ಧರ್ಮ ವಿರುದ್ಧ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಡಿವೈಎಸ್‌ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯ ನಿಧಿ ಸ್ಟಾಲಿನ್ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿದೆ. ಸನಾತನ ಧರ್ಮಕ್ಕೆ ತನ್ನದೇ ಆದ ಮಹತ್ವವಿದೆ. ಸನಾತರ ಧರ್ಮ ಯಾವುದೋ ಒಂದು ಗ್ರಂಥಕ್ಕೋ, ಅಥವಾ ಪ್ರವಾದಿಗೂ ಅಂಟಿಕೊಂಡ ಧರ್ಮವಲ್ಲ. ಸನಾತನ ಅಥವಾ ಹಿಂದೂ ಧರ್ಮ ಎಂದರೆ ಶಾಶ್ವತ ಧರ್ಮ ಮತ್ತು ಶಾಶ್ವತ ನಂಬಿಕೆ. ಇಂತಹ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಉದಯನಿಧಿ ಸ್ಟಾಲೀನ್ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ.
ಅವರು ನೀಡಿರುವ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ‍್ಯದ ವ್ಯಾಪ್ತಿಗೆ ಬರುವುದಿಲ್ಲ. ಅವರ ಹೇಳಿಕೆ ಅಪರಾಧಿ ಸ್ವಭಾವ ಹೊಂದಿದೆ. ಸರ್ವೆ ಜನಾ ಸುಖಿನೋ ಭವಂತು ಎಂದು ಭೋದಿಸುವ ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎನ್ನುವ ಹೇಳಿಕೆ ಹಿಂದೆ ಕುತ್ಸಿಕ ಮನೋಭಾವನೆ ಇದೆ. ಈ ಹಿನ್ನಲೆಯಲ್ಲಿ ಉದಯನಿಧಿ ಸ್ಟಾಲಿನ್ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಸ್‌ಪಿ ವ್ಯಾಲಂಟೈನ್ ಡಿಸೋಜಾ ಅವರಿಗೆ ನಾಗರಾಜ ನಾಯಕ ದೂರನ್ನ ಸಲ್ಲಿಸಿದ್ದಾರೆ.

300x250 AD

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನಾಗೇಶ್ ಕುರುಡೇಕರ್, ಮನೋಜ್ ಭಟ್ಟ, ಸುನಿಲ್ ತಾಮಸೆ, ರವಿ ರಾವ್, ಉದಯ ಬಶೆಟ್ಟಿ, ಅರುಣ ಹಬ್ಬು, ಗಜಾನನ ಕುಬಾಡೆ, ಎಲ್.ಕೆ.ನಾಯ್ಕ್, ರೋಷನಿ ಮಾಳ್ಸೇಕರ, ಉಲ್ಲಾಸ ಕೇಣಿ, ಸಂದೇಶ್ ಶೆಟ್ಟಿ, ಸೂರ್ಯಪ್ರಕಾಶ್ ಶೆಟ್ಟಿ, ಮಹೇಂದ್ರ ಬಾನಾವಳಿ, ರವಿರಾಜ್ ಅಂಕೋಲೇಕರ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top