Slide
Slide
Slide
previous arrow
next arrow

ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರದ್ ನಾಯಕ್’ಗೆ ಬೀಳ್ಕೊಡುಗೆ

300x250 AD

ಶಿರಸಿ: ಇಲ್ಲಿನ ಸಾಮ್ರಾಟ್ ಹೋಟೆಲ್ ವಿನಾಯಕ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ) ಜಿಲ್ಲಾ ಶಾಖೆಯ ಜಿಲ್ಲಾಮಟ್ಟದ ಸರ್ವಸಾಧಾರಣ ಸಭೆ ನಡೆಯಿತು. ಹಾಗೆಯೇ ಇದೇ ಸಂದರ್ಭದಲ್ಲಿ ನಿಕಟ ಪೂರ್ವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರದ ನಾಯಕ್ ಇವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಡಾ. ಶರದ ನಾಯಕ್’ರನ್ನು ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಹೇಶ್ ಡಿ ನಾಯಕ, ಜಿಲ್ಲಾ ಔಷಧ ಉಗ್ರಾಣ ಶಿರಸಿಯ ಪ್ರಭಾರಧಾರಕ ಅಮಿತ್ ಅಮಟೆ, ನಿಕಟಪೂರ್ವ ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷ ಎಸ್. ವಿ. ಭಟ್, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಎಲ್ಲಾ ಸದಸ್ಯರು ಮತ್ತು ಗ್ರೀನ್ ಕೇರ್ (ರಿ.) ಶಿರಸಿಯ ಕಾರ್ಯದರ್ಶಿ ಜಿತೇಂದ್ರ ಕುಮಾರ್ ತೋನ್ಸೆ ಸೇರಿ ಡಾ. ಶರದ ನಾಯಕ್ ಅವರನ್ನು ಗೌರವಿಸಿ ಅವರ ಸರ್ಕಾರಿ ಸೇವೆಯ ಬಗ್ಗೆ ಗುಣಗಾನ ಮಾಡಿ ಸನ್ಮಾನಿಸಿ, ಬೀಳ್ಕೊಟ್ಟರು.

300x250 AD

ಕಾರ್ಯಕ್ರಮವನ್ನು ಶರಣಪ್ಪ ಗೊಜನೂರ ನಿರೂಪಿಸಿದರು. ವಿಜಯಕುಮಾರ ನಾಗನೂರ ವಂದನಾರ್ಪಣೆಯನ್ನು ಮಾಡಿದರು.

Share This
300x250 AD
300x250 AD
300x250 AD
Back to top