• Slide
    Slide
    Slide
    previous arrow
    next arrow
  • ಆಸ್ಪತ್ರೆಗೆ ಬಾರದ ಮಕ್ಕಳ ವೈದ್ಯರು; ಪೋಷಕರ ಪ್ರತಿಭಟನೆ

    300x250 AD

    ಮುಂಡಗೋಡ: ತಾಲೂಕಾ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಬಾರದೆ ಪೋಷಕರು ವೈದ್ಯರಿಗಾಗಿ ಕಾದು ಕಾದು ಸುಸ್ತಾಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
    10- 15 ದಿನಗಳಿಂದ ಮಕ್ಕಳ ವೈದ್ಯರು ಆಸ್ಪತ್ರೆಗೆ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು ಬರೆದುಕೊಡುವ ಔಷಧಿ ಕೇಂದ್ರದಲ್ಲಿ ಒಂದೋ- ಎರಡೋ ಔಷಧಿ ದೊರಕುತ್ತದೆ. ಬಹುತೇಕ ಔಷಧಿಗಳನ್ನು ಖಾಸಗಿ ಔಷಧಿ ಕೇಂದ್ರದಲ್ಲಿ ಖರೀದಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
    ಸ್ಥಳಕ್ಕೆ ಪೊಲೀಸ್ ಪಿಎಸ್‌ಐ ಯಲ್ಲಾನಿಂಗ ಕುನ್ನೂರ, ಎನ್.ಡಿ.ಜಕ್ಕಣ್ಣನವರ ಹಾಗೂ ಸಿಬ್ಬಂದಿ ಸುರೇಶ ಸ್ಥಳಕ್ಕೆ ಬಂದು ಸಾರ್ವಜನಿಕರಿಗೆ ತಿಳಿಪಡಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top