Slide
Slide
Slide
previous arrow
next arrow

ಅಂತರ ವಿದ್ಯಾಲಯ ಯುವಜನೋತ್ಸವ: ಎಂಎಂ ಮಹಾವಿದ್ಯಾಲಯದ ಸಾಧನೆ

300x250 AD

ಶಿರಸಿ: ಹಳಿಯಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಅಂತರ ವಿದ್ಯಾಲಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ  ಉತ್ತಮ ಸಾಧನೆ ಮಾಡಿ ಧಾರವಾಡದಲ್ಲಿ ನಡೆಯುವ ವಿಶ್ವವಿದ್ಯಾಲಯ ಹಂತಕ್ಕೆ ಆಯ್ಕೆ ಆಗಿದ್ದಾರೆ.

 ಪ್ರಜ್ವಲ್ ಹೆಗಡೆ ಸಿತಾರ್ ವಾದನದಲ್ಲಿ ಪ್ರಥಮ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ದ್ವಿತೀಯ ಸ್ಥಾನ, ಜಾತವೇದ ಭಟ್ಟ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,ಅಭಿಷೇಕ ಮುರುಡೇಶ್ವರ ತಬಲಾ ವಾದನದಲ್ಲಿ ದ್ವಿತೀಯ, ಪಲ್ಲವಿ ಗೌಡ ರಂಗೋಲಿ ಸ್ಪರ್ಧೆಯಲ್ಲಿ ತೃತೀಯ, ವರದರಾಜ್ ಹಾಗೂ ತಂಡ ಜಾನಪದ ನೃತ್ಯದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆಯನ್ನು ಮಾಡಿದ್ದಾರೆ.

300x250 AD

ವಿದ್ಯಾರ್ಥಿಗಳ ಸಾಧನೆಗೆ ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ , ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್, ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ, ಸದಸ್ಯರು, ಪದಾಧಿಕಾರಿಗಳು, ಕಲಾ ವಿಭಾಗದ ಸಂಚಾಲಕ ಪ್ರೊ ಎಂ.ಎನ್. ಭಟ್, ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top