Slide
Slide
Slide
previous arrow
next arrow

ದೊಡ್ಮನೆಯಲ್ಲಿ ವಾಮನ ಚರಿತ್ರೆ ತಾಳಮದ್ದಲೆ

300x250 AD

ಸಿದ್ದಾಪುರ: ತಾಲೂಕಿನ ದೊಡ್ಮನೆ ಶ್ರೀ ಮಹಾಗಣಪತಿ ದೇವಾಲಯದ ಸಭಾಭವನದಲ್ಲಿ ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ದೊಡ್ಮನೆ ಇವರ ಆಶ್ರಯದಲ್ಲಿ ಕುರಿಯ ವಿಠ್ಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರಿಂದ ವಾಮನ ಚರಿತ್ರೆ ಎಂಬ ತಾಳಮದ್ದಲೆಯನ್ನು ಪ್ರದರ್ಶಿಸಲಾಯಿತು.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್ ಯಲ್ಲಾಪುರ, ಇವರುಗಳು ಉತ್ತಮವಾದ ಸಾಥ್ ನೀಡಿದರು. ಮುಮ್ಮೇಳದಲ್ಲಿ ವಿದ್ವಾನ್ ಉಮಾಕಾಂತ್ ಭಟ್ ಕೆರೆಕೈ ಬಲಿಯ ಪಾತ್ರದಲ್ಲಿ, ವಿದ್ವಾನ್ ಅಶೋಕ್ ಭಟ್ ಉಜಿರೆ ಶುಕ್ರಾಚಾರ್ಯನ ಪಾತ್ರದಲ್ಲಿ, ಎಂ.ಎನ್. ಹೆಗಡೆ ಹಳುವಳ್ಳಿ ವಾಮನ ಪಾತ್ರದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ವಿದ್ಯಾವಾಚಸ್ಪತಿ ಪ್ರಶಸ್ತಿಗೆ ಭಾಜನರಾದ ವಿದ್ವಾನ್ ಉಮಾಕಾಂತ್ ಕೆರೆಕೈ ಇವರನ್ನು ಸನ್ಮಾನಿಸಲಾಯಿತು. ಹಾಗೂ ಇತ್ತೀಚೆಗೆ ನಿಧನರಾದ ಯಕ್ಷಗಾನದ ಹಿರಿಯ ಕಲಾವಿದ ಕುಂಬ್ಳೆ ಸುಂದರ್ ರಾವ್ ಇವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ತಿಮ್ಮಪ್ಪ ಭಟ್ ಸಾರಂಗ್ ಸ್ವಾಗತಿಸಿದರು. ಕೇಶವ ಹೆಗಡೆ ಕಿಬ್ಳೆ ಕಾರ್ಯಕ್ರಮ ನಿರ್ವಹಿಸಿ ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top