ಶಿರಸಿ: ನಗರದ ಲಯನ್ಸ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗೋವಾದ ಪೋಂಡಾದಿಂದ ಆಗಮಿಸಿದ ಲಯನ್ ಸಾಗರ ಸಾಕೋರ್ಡೇಕರರು ವೇದ ಗಣಿತದ ಬಗ್ಗೆ 2 ಘಂಟೆಗಳ ಕಾಲ ಪಾಠ ಮಾಡಿದರು. ಡಿಸ್ಟ್ರಿಕ್ಟ್ ಛೇರ್ಪರ್ಸನ್ರಾಗಿರುವ ಸಾಗರ್ ನೂರಾರು ತರಗತಿಗಳನ್ನು ಮಾಡಿದ್ದಾರೆ. ಭಾರತದ ಅತ್ಯಂತ ಪ್ರಾಚೀನ ವಿಧಾನವಾದ ಈ ವೇದಗಣಿತದಲ್ಲಿ ಸಂಸ್ಕೃತದಲ್ಲಿರುವ 16 ಸೂತ್ರಗಳನ್ನು ಉಪಯೋಗಿಸಿ ಅತ್ಯಂತ ಸುಲಭವಾಗಿ ಅತೀ ಕಷ್ಟಕರವಾದ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಬಿಡಿಸುವ ಪರಿಣಿತಿಯನ್ನು ಇವರಿಂದ ಪಡೆಯಬಹುದಾಗಿದೆ.ತರಗತಿಯ ನಂತರ ಗಣಿತ ಕಷ್ಟ ಅನ್ನುವ ಮಕ್ಕಳೂ, ಉತ್ಸಾಹದಲ್ಲಿ ಗಣಿತವನ್ನು ಆನಂದಿಸಿ ಮುಂದೆ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ಸಾಗರ ಸಾಕೊರ್ಡೇಕರರಿಂದ ಲಯನ್ಸ’ನಲ್ಲಿ ವೇದಗಣಿತ ಪಾಠ
