• Slide
    Slide
    Slide
    previous arrow
    next arrow
  • ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾತಂಡಕ್ಕೆ ಆಹ್ವಾನ

    300x250 AD

    ಶಿರಸಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 2 ನೇ ವಾರದಲ್ಲಿ ಶಿರಸಿಯಲ್ಲಿ ಹಮ್ಮಿಕೊಂಡಿರುವ ನುಡಿಹಬ್ಬ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಾಗವಹಿಸಲು ಆಸಕ್ತ ಇರುವಂತಹ ಕಲಾವಿದರು ಮತ್ತು ಕಲಾವಿದರ ತಂಡ ನವೆಂಬರ್ 5, ಶನಿವಾರ ಸಾಯಂಕಾಲ 4 ರಿಂದ 7 ಗಂಟೆಯ ಒಳಗೆ ಸ್ಫಂದನಾ ಸಾಂಸ್ಕೃತಿಕ ಅಕಾಡೆಮಿ ಕಾರ್ಯಾಲಯಕ್ಕೆ ಖುದ್ದು ಹಾಜರಿದ್ದು ಮಾಹಿತಿ ನೀಡಲು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕನ್ನಡ ನಾಡು ನುಡಿ, ದೇಶಭಕ್ತಿ, ನೃತ್ಯ, ಕಲೆ ಮತ್ತು ಸಾಂಸ್ಕೃತಿಕ ಸ್ವಇಚ್ಛೆಯಿಂದ ಕಾರ್ಯಕ್ರಮ ನೀಡಲು ಇಚ್ಛೆ ಪಡುವಂತವರು ಸ್ಫಂದನಾ ಸಾಂಸ್ಕೃತಿಕ ಅಕಾಡೆಮಿ, ಹಳೆ ಆರ್.ಟಿ.ಓ ಕಚೇರಿ ಬಿಲ್ಡಿಂಗ್, ಝೂ ಸರ್ಕಲ್‌ಗೆ ಖುದ್ದು ಹಾಜರಿದ್ದು ಕಾರ್ಯಮದ ವಿವರ ನೀಡಬೇಕಾಗಿ ತಿಳಿಸಲಾಗಿದ್ದು, ಹೆಚ್ಚಿನ ವಿವರಕ್ಕಾಗಿ ಮೋ.ನಂ: 9449193801 ಹಾಗೂ ಆಫೀಸ್ ನಂ: 8073847145 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top