Slide
Slide
Slide
previous arrow
next arrow

ಪ್ರವೀಣ್ ನೆಟ್ಟಾರು ಹತ್ಯೆಗೆ ತೀವ್ರ ಖಂಡನೆ: ರಪೀಕ್ ಎಸ. ಪಠಾಣ್

300x250 AD

ಶಿರಸಿ:ಬಿ.ಜೆ.ಪಿ. ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಯಾಗಿರುವುದು ದುಃಖದ ವಿಷಯ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷ ಅಲ್ಪ ಸಂಖ್ಯಾತರ ಮೋರ್ಛಾ ಹಾಗೂ ಮಾಜಿ ಜಿಲ್ಲಾ ಅಧ್ಯಕ್ಷರು ವಕ್ಫ ಮಂಡಳಿ, ಮಾಜಿ ಕಾರ್ಯಕಾರಿಣಿ ಸದಸ್ಯರಾದ ರಫೀಕ್ ಎಸ್. ಪಠಾಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಪ್ರವೀಣ್ ನೆಟ್ಟಾರುರವರನ್ನು ಕೊಲೆ ಮಾಡಿದಂತ ಕೊಲೆಗಡುಕರನ್ನು ಕೂಡಲೇ ಬಂಧಿಸಿ ಕಾನೂನಿನ ಚೌಕಟ್ಟಿನಲ್ಲಿ ಶೀಘ್ರವಾಗಿ ಪ್ರಕರಣವನ್ನು ಅಂತಿಮಗೊಳಿಸಿ ಗಲ್ಲಿಗೇರಿಸಬೇಕು. ಹಾಗೂ ಇದರ ಹಿಂದೆ ಇದ್ದು ಕುಮ್ಮಕ್ಕು ನೀಡಿದ ಸಂಘಟನೆಗಳನ್ನು ನಿಷೇಧಿಸಿ ದುಷ್ಟ ಶಕ್ತಿಗಳನ್ನು ಸದೆಬಡೆದು ನ್ಯಾಯ ದೊರಕಿಸಿಕೊಡಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮೃತರಿಗೆ ಸದ್ಗತಿ ದೊರೆತು,ಮೃತರ ಕುಟುಂಬದ ಸದಸ್ಯರಿಗೆ ದೇವರು ದುಃಖವನ್ನು ಬರಿಸುವ ಶಕ್ತಿಕೊಡಲಿ ಎಂದು ಪ್ರಾರ್ಥಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top