Slide
Slide
Slide
previous arrow
next arrow

ಬಿಜೆಪಿ ಪಕ್ಷಕ್ಕೆ ಸೇರಿದ ಕಾಂಗ್ರೆಸ್ ಸದಸ್ಯ

300x250 AD

ಮುಂಡಗೋಡ: ತಾಲೂಕಿನ ಇಂದೂರ ಗ್ರಾಮ ಪಂಚಾಯತಿ ಕಾಂಗ್ರೆಸ್ ಸದಸ್ಯ ರಾಜು ಹರಿಜನ ಬಿಜೆಪಿ ತಾಲೂಕಾ ಅಧ್ಯಕ್ಷ ನಾಗಭೂಷಣ ಹಾವಣಗಿ, ರವಿಗೌಡ ಪಾಟೀಲ್ ಹಾಗೂ ಕೆಂಜೋಡಿ ಗಲಬಿ ಇವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೋಮವಾರ ಸೇರ್ಪಡೆಗೊಂಡಿದ್ದಾರೆ,

ನಮ್ಮ ಕೆಲಸವಾಗಬೇಕು ಎಂದರೆ ಯಾರಿಗೆ ಕೇಳಬೇಕು? ಕಾಂಗ್ರೆಸ್‌ನಲ್ಲಿ ನಮಗೆ ಸ್ಪಂದನೆ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಎಂಎಲ್‌ಎ ಹಾಗೂ ಸಚಿವರು ಇರುವುದರಿಂದ ಬಿಜೆಪಿ ಸೇರಿದರೆ ಸಾರ್ವಜನಿಕರ ಕೆಲಸ ಕಾರ್ಯಗಳು ಮಾಡಲು ಸುಲಭ. ಈ ಕಾರಣದಿಂದ ಬಿಜೆಪಿ ಸೇರಿದ್ದೇನೆ ಎಂದು ರಾಜು ಬಿಜೆಪಿ ಸೇರ್ಪಡೆಯ ಬಳಿ ತಿಳಿಸಿದ್ದಾರೆ.

300x250 AD

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಶಶಿಧರ ಪರವಪೂರ, ಫಕ್ಕೀರೇಶ ತಾವರಗೇರಿ, ನಾಗಪ್ಪ ಇಂಗ್ಲೆ, ನಾಗಪ್ಪ ಕುರಿಯವರ ಮತ್ತು ಪಕ್ಷದ ಮುಖಂಡರಾದ ಶಿವಾಜಿ ದೇವಿಕೊಪ್ಪ, ಮಂಜು ಮುತಗಿ ಹಾಗೂ ಬಸವರಾಜ ಹೊಂಡದಕಟ್ಟಿ ಸೇರಿದಂತೆ ಹಲವರಿದ್ದರು.

Share This
300x250 AD
300x250 AD
300x250 AD
Back to top