Slide
Slide
Slide
previous arrow
next arrow

ಕೆರೇಕೈರಿಗೆ ವಿದ್ಯಾ ವಾಚಸ್ಪತಿ; ಯಕ್ಷಗಾನಕ್ಕೂ ಹೆಮ್ಮೆ

300x250 AD

ಶಿರಸಿ:  ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ ನೀಡುವ ವಿದ್ಯಾ ವಾಚಸ್ಪತಿ ಡಿ ಲಿಟ್ ಪದವಿ ನಾಡಿನ ಹೆಸರಾಂತ ವಿದ್ವಾಂಸ ಕೆರೇಕೈ ಉಮಾಕಾಂತ ಭಟ್ಟ ಅವರಿಗೆ‌ ಪ್ರಕಟಗೊಂಡ ಹಿನ್ನಲೆಯಲ್ಲಿ ಸೋಮವಾರ ಅವರ ಸ್ವ ಗೃಹಕ್ಕೆ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ   ಕೃಷ್ಣ ಯಾಜಿ ಬಳಕೂರು ಹಾಗೂ ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ  ಅಭಿನಂದಿಸಿದರು.

ಕರ್ನಾಟಕ ಹೆಮ್ಮೆ‌ಪಡುವ ವಿದ್ವಾಂಸರು‌ ಉಮಾಕಾಂತರು. ಅವರಿಗೆ ಇಂಥ ಪದವಿ ಅರಸಿ ಬಂದಿದ್ದು ಯೋಗ್ಯವಾಗಿದೆ. ಹಾಗೂ ಅವರು ನಮ್ಮ ಜಿಲ್ಲೆಯ ಹೆಮ್ಮೆ. ಸಂಸ್ಕೃತ ಕ್ಷೇತ್ರ ಮಾತ್ರವಲ್ಲ ಯಕ್ಷಗಾನ, ತಾಳಮದ್ದಲೆ ಕ್ಷೇತ್ರಕ್ಕೂ ಅವರಿಗೆ ಈ‌‌ ಪದವಿ  ಒದಗಿ ಬಂದಿರುವದು ಅಭಿಮಾನ ಮೂಡಿಸುವಂಥದ್ದು ಎಂದು ಬಣ್ಣಿಸಿದರು.

300x250 AD

ಈ ವೇಳೆ ಸುನಂದಾ‌ ಉಮಾಕಾಂತ ಭಟ್ಟ ಕೆರೇಕೈ ಅವರನ್ನೂ ಗೌರವಿಸಲಾಯಿತು. ಕಲಾವಿದ ವಿನಾಯಕ ಹೆಗಡೆ‌ ಕಲಗದ್ದೆ, ಅಶೋಕ‌ ನಾಯ್ಕ, ಜ್ಯೋತಿ ರಘುರಾಮ ಇತರರು ಇದ್ದರು.

Share This
300x250 AD
300x250 AD
300x250 AD
Back to top