Slide
Slide
Slide
previous arrow
next arrow

ಟಿಎಮ್‌ಎಸ್ ಪ್ರಗತಿಯಲ್ಲಿ ಕಾನಸೂರು ಭಾಗದ ರೈತರ ಪಾತ್ರ ಮಹತ್ವದ್ದು: ಆರ್.ಎಮ್.ಹೆಗಡೆ

300x250 AD

ಸಿದ್ದಾಪುರ: ಟಿಎಂಎಸ್‌ನ ಪ್ರಗತಿಯ ಹಾದಿಯಲ್ಲಿ ಕಾನಸೂರ ಭಾಗದ ರೈತರ ಹೆಜ್ಜೆ ಗುರುತು ಶಾಶ್ವತ.ಸದಾ ಪ್ರಗತಿಪರ ಮನಸ್ಥಿತಿಯನ್ನು ಹೊಂದಿದ ಇಲ್ಲಿಯ ಸದಸ್ಯರು ಸಹೃದಯಿಗಳು ಎಂದು ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.

ತಾಲೂಕಿನ ಕಾನಸೂರಿನಲ್ಲಿರುವ ಟಿಎಂಎಸ್ ಶಾಖೆಯಲ್ಲಿ ನಡೆದ ಸಹಕಾರಿ ಸಭೆಯಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಕಾನಸೂರ ಶಾಖೆಯಲ್ಲಿ 2024-25ನೆ ಸಾಲಿನಲ್ಲಿ ದಾಖಲೆ ಪ್ರಮಾಣದ ಮಹಸೂಲ ವಿಕ್ರಿಯಾಗಿದೆ. ಅಡಕೆ ವಿಕ್ರಿ ವ್ಯವಹಾರದ ಜತೆ ಇನ್ನೂ ಹೆಚ್ಚಿನ ಸೇವೆಗಳನ್ನು ಆರಂಭಿಸಬೇಕೆಂದು ಬೇಡಿಕೆಯಿದ್ದು ಸಂಘದ ಆರ್ಥಿಕ ಇತಿ ಮಿತಿಗೆ ಒಳಪಟ್ಟು ಸದಸ್ಯರ ಬೇಡಿಕೆಯಂತೆ ಹೆಚ್ಚಿನ ಯೋಜನೆಗಳನ್ನು ನೀಡುವ ಕುರಿತು ತೀರ್ಮಾನಿಸಲಾಗುವುದು.
ಈಗಾಗಲೇ ಗೋದಾಮು ಹಾಗೂ ವಿಶಾಲವಾದ ವ್ಯಾಪಾರಂಗಣವನ್ನು ನಿರ್ಮಿಸಲಾಗಿದೆ.ರೈತ ಸದಸ್ಯರು ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳು ಇನ್ನೂ ಹೆಚ್ಚಿನ ಮಹಸೂಲನ್ನು ಸಂಘದಲ್ಲಿಯೇ ವಿಕ್ರಿಯಿಸುವುದರ ಮೂಲಕ ಸಂಘದ ಅಭಿವೃದ್ದಿಗೆ ಸಹಕರಿಸಬೇಕೆಂದರು.

ನಿರ್ದೇಶಕರಾದ ಕೆ.ಕೆ ನಾಯ್ಕ ಸುಂಕತ್ತಿ, ಜಿ.ಎಂ. ಭಟ್ಟ ಕಾಜಿನಮನೆ, ಸಿ.ಎನ್ ಹೆಗಡೆ ತಂಗರ‍್ಮನೆ, ಇಂದಿರಾ ಎಸ್. ಭಟ್ಟ ಗುಡ್ಡೆಕೊಪ್ಪ, ಎಂ.ಎನ್ ಹೆಗಡೆ ತಲೆಕೆರೆ, ಸುಬ್ರಮಣ್ಯ ಎಸ್. ಭಟ್ಟ ಚಟ್ನಳ್ಳಿ, ನಂದನ ಹೆಗಡೆ ದಂಟಕಲ್, ಕೆ.ಆರ್. ವಿನಾಯಕ ಕೋಲಸಿರ್ಸಿ, ವ್ಯವಸ್ಥಾಪಕ ಸತೀಶ ಎಸ್. ಹೆಗಡೆ ಹೆಗ್ಗಾರಕೈ, ಸಲಹಾ ಸಮಿತಿಯ ಸದಸ್ಯರಾದ ಎಸ್.ಎನ್. ಭಟ್ಟ ಗಿರಿಗಡ್ಡೆ, ನಾಗೇಶ ಹೆಗಡೆ ಕುಂಟಗಳಲೆ ಇತರರಿದ್ದರು. ಜಿ.ಜಿ ಹೆಗಡೆ ಬಾಳಗೋಡ ನಿರ್ವಹಿಸಿದರು.

300x250 AD

ಸನ್ಮಾನ: ಸಂಘದ ಹಿರಿಯ ಸದಸ್ಯರಾದ ಕೇಶವ ರಾಮಕೃಷ್ಣ ಹೆಗಡೆ ದೇವಿಸರ,ಕಮಲಾಕರ ಗಣಪತಿ ಹೆಗಡೆ ಗಟ್ಟಿಕೈ, ಪರಮೇಶ್ವರ ನೀಲಕಂಠ ನಾಯ್ಕ ಹಳ್ಳಿಬೈಲ್, ಈಶ್ವರ ರಾಮ ಶೆಟ್ಟಿ ಹನುಮನಜಡ್ಡಿ,ಗಣಪತಿ ಪರಮೇಶ್ವರ ಹೆಗಡೆ ಹೊಸಗದ್ದೆ, ಮಾಧುರಿ ಗುರುಪಾದ ಹೆಗಡೆ ಹುಣಸೆಕೊಪ್ಪ, ಗೌರಿ ಬಂಗಾರ್ಯ ನಾಯ್ಕ ಹಂಚಳ್ಳಿ ಇವರನ್ನು ಸನ್ಮಾನಿಸಲಾಯಿತು.

Share This
300x250 AD
300x250 AD
300x250 AD
Back to top