ಯಲ್ಲಾಪುರ: ಜೂ.16ರಂದು NPCIL ಕೈಗಾದ ನಿಗಮ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಗೇರಾಳ-ಹೆಗ್ಗಾರ 3 ಕಿಮೀ. ಕಾಂಕ್ರಿಟ್ ರಸ್ತೆಯು ತಾಲೂಕಿನ ಮಾವಿನಮನೆ ಪಂಚಾಯತದಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಉದ್ಘಾಟಕರಾಗಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರನ್ನು ನಮೂದಿಸಿದ್ದು, ಸಮಾರಂಭದ ದಿನ ಶಿಲಾ ನಾಮಫಲಕದಲ್ಲಿ ಸಂಸದರ ಹೆಸರನ್ನು ಶಿಲಾ ನಾಮಫಲಕದಲ್ಲಿ ಬಿಡಲಾಗಿದೆ.
ಬದಲಾಗಿ ಉದ್ಘಾಟಕರಾಗಿ ಶಾಸಕರಾದ ಶಿವರಾಮ ಹೆಬ್ಬಾರ ಹೆಸರನ್ನು ಶಿಲಾನಾಮಫಲಕದಲ್ಲಿ ನಮೂದಿಸಲಾಗಿದ್ದು, ಇದು ಯಾವ ಕಾರಣದಿಂದಾಗಿ ಹೀಗಾಗಿದೆ.? ಕೈಗಾ ಅಧಿಕಾರಿಗಳ ಅಥವಾ ಸ್ಥಳೀಯ ಕೆಲ ಪಂಚಾಯತದವರ ತಪ್ಪಿನಿಂದ ಶಿಲಾ ನಾಮಫಲಕ ಬದಲಾಗಿದೆಯಾ ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಬದಲಾವಣೆಗೆ ಸ್ಪಷ್ಟನೆಯನ್ನು ನೀಡಲು ಬಿಜೆಪಿ ಮುಖಂಡರು, ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಶಾಸಕರಾದ ಶಿವರಾಮ ಹೆಬ್ಬಾರ್ ಅದೇ ಸಭೆಯಲ್ಲಿ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ತರಬಾರದು ಎಂದು ಹೇಳಿದ್ದು, ಆ ಸಂಧರ್ಭದಲ್ಲಿ ಗೌರವಾನ್ವಿತ ಸಂಸದರಿಗೆ ಅಗೌರವ ತೋರಿಸಿದ್ದು ಶಾಸಕರ, ಅಧಿಕಾರಿ ಗಮನಕ್ಕೆ ಬಂದಿಲ್ಲವೇ? ಇಂತಹ ಘಟನೆಯನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ ಕೈಗಾ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟನೆ ಕೋರಿ ಪತ್ರ ಬರೆಯಲಾಗಿದೆ ಎಂದು ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ದಿಶಾ ಕಮೀಟಿ ಸದಸ್ಯರಾದ ಉಮೇಶ ಭಾಗ್ವತ ಮತ್ತು ಸುನಂದಾ ಮರಾಠಿ, ಬಿಜೆಪಿ ಮಂಡಳ ಅಧ್ಯಕ್ಷರಾದ ಪ್ರಸಾದ ಹೆಗಡೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.