ಶಿರಸಿ: ಪ್ರಜ್ವಲ ಟ್ರಸ್ಟ್ & ಸುರ್ ಸಪ್ತಕ ಮ್ಯೂಸಿಕ್ ಟ್ರಸ್ಟ್ ಸಹಯೋಗದಲ್ಲಿ ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಸ್ಮರಣೆಯ ಪ್ರಯುಕ್ತ ‘ತಾರ ಶಡ್ಜ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಇಂದು ಜೂ.8, ರವಿವಾರದಂದು ನಗರದ ಟಿಆರ್ಸಿ ಸಭಾಭವನದಲ್ಲಿ ಸಂಜೆ 5 ಗಂಟೆಯಿಂದ ಆಯೋಜಿಸಲಾಗಿದೆ.
ಪಂ. ಭೀಮಸೇನ ಜೋಶಿಯವರ ಮೊಮ್ಮಗ ವಿರಾಜ್ ಜೋಶಿ ಹಾಗೂ ಪಂ. ರಾಜನ್ & ಸಾಜನ್ ಮಿಶ್ರ ಇವರ ಶಿಷ್ಯರಾದ ವಿದುಷಿ ಜಸ್ಮಿತ ಕೌರ್ ಇವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಇವರಿಗೆ ತಬಲಾದಲ್ಲಿ ಪಂ. ಭರತ್ ಕಾಮತ್, ಪುಣೆ, ಮಧು ಕುಡಾಲ್ಕರ್, ಅಂಕೋಲಾ, ಹಾರ್ಮೋನಿಯಂನಲ್ಲಿ ಸತೀಶ್ ಭಟ್, ಹೆಗ್ಗಾರ್, ಭರತ್ ಹೆಗಡೆ, ಶಿರಸಿ, ಪಖವಾಜ್ನಲ್ಲಿ ಧ್ಯಾನೇಶ್ವರ ದುಢಾನೇ, ಪಂಢರಾಪುರ, ಮಂಜಿರಾದಲ್ಲಿ ದೇವದಾಸ ನಾಗರಮಠ, ಮಂಗಳೂರು, ರವಿ ಹೆಗಡೆ ಸಹಕರಿಸಲಿದ್ದಾರೆ. ಕಾರ್ಯಕ್ರಮವನ್ನು ಪಂ. ಶ್ರೀನಿವಾಸ್ ಜೋಶಿ, ಪುಣೆ , ಹಾಗೂ ಸಾಮಾಜಿಕ ಅನಂತಮೂರ್ತಿ ಹೆಗಡೆ, ಶಿರಸಿ ಉದ್ಘಾಟಿಸಲಿದ್ದಾರೆ.
ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.