Slide
Slide
Slide
previous arrow
next arrow

ಹೊಸಳ್ಳಿ ಹಾಲು ಉತ್ಪಾದಕ ಸಂಘಕ್ಕೆ 92 ಸಾವಿರ ರೂ. ಲಾಭ

300x250 AD

ಸಿದ್ದಾಪುರ: ತಾಲೂಕಿನ ಹೊಸಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 92ಸಾವಿರ ರೂ. ನಿಕ್ಕಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನಾಗಪತಿ ಡಿ.ನಾಯ್ಕ ಹೇಳಿದರು.

ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚು ಹಾಲು ನೀಡಿದವರಿಗೆ ಹಾಗೂ ಸಂಘಕ್ಕೆ ಉತ್ತಮ ಹಾಲು ನೀಡಿದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಹಾಗೂ ಧಾರವಾಡ ಹಾಲು ಒಕ್ಕೂಟದ ಸಿದ್ದಾಪುರ ತಾಲೂಕು ಪಶುವೈದ್ಯಾಧಿಕಾರಿ ಡಾ.ವಿನಾಯಕ ಬಿರಾದಾರ ಇತ್ತೀಚೆಗೆ ನಿಧನಹೊಂದಿದ ಸಂಘದ ಸದಸ್ಯರಾಗಿದ್ದ ರಾಮಚಂದ್ರ ದುರ್ಗ ನಾಯ್ಕ ಅವರ ಪತ್ನಿ ಜಯಲಕ್ಷ್ಮಿ ರಾಮಚಂದ್ರ ನಾಯ್ಕ ಅವರಿಗೆ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದಿಂದ ನೀಡಲಾಗುವ 10ಸಾವಿರ ರೂಗಳ ಚೆಕ್‌ನ್ನು ವಿತರಿಸಿದರು.
ಸಂಘದ ಉಪಾಧ್ಯಕ್ಷ ಲಕ್ಷ್ಮಿನಾರಾಯಣ ಹೆಗಡೆ ಹಾಗೂ ಸಂಘದ ಎಲ್ಲ ನಿರ್ದೇಶಕರುಗಳು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಗಂಗಾಧರ ರಾಮ ನಾಯ್ಕ ವರದಿ ವಾಚಿಸಿ ಕಾರ್ಯಕ್ರಮ ನಿರ್ವಹಿಸಿದರು.ದರ್ಶನ ಎಂ.ನಾಯ್ಕ ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top