Slide
Slide
Slide
previous arrow
next arrow

ಈಜು ಸ್ಪರ್ಧೆ: ಶಾಲಾ ಶಿಕ್ಷಕ ಶ್ಯಾಮಸುಂದರ ರಾಷ್ಟ್ರ ಮಟ್ಟಕ್ಕೆ

300x250 AD

ಸಿದ್ದಾಪುರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆ. 17,18,19ರಂದು ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಸಿದ್ದಾಪುರ ತಾಲೂಕಿನ ಇಳಿಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ಯಾಮಸುಂದರ ಜಿ. ವಯಕ್ತಿಕ ಎಲ್ಲ ವಿಭಾಗಗಳಲ್ಲಿ ಸ್ವರ್ಣ ಪದಕ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ಸತತ ಹತ್ತುವರ್ಷಗಳಿಂದ ಪ್ರಥಮಸ್ಥಾನಗಳಿಸುತ್ತ ಬರುತ್ತಿರುವ ಶ್ಯಾಮಸುಂದರ ಇವರು ಕಠಿಣ ಪರಿಶ್ರಮ, ಆಸಕ್ತಿ,ಶೃದ್ಧೆ, ನಿರಂತರ ಪ್ರಯತ್ನ, ಆಹಾರ, ಆರೋಗ್ಯ, ವ್ಯಾಯಾಮ ಎಲ್ಲದರಲ್ಲೂ ಶಿಸ್ತನ್ನು ಅಳವಡಿಸಿಕೊಂಡು ಬರುತ್ತಿರುವುದು ಸಾಧನೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top