Slide
Slide
Slide
previous arrow
next arrow

ಅಕ್ರಮ ಜಾನುವಾರು ಸಾಗಾಟ: ಪ್ರಕರಣ ದಾಖಲು

300x250 AD

ಯಲ್ಲಾಪುರ: ಯಾವುದೇ ಪಾಸು ಪರ್ಮಿಟ್ ಇಲ್ಲದೇ ಒತ್ತೊತ್ತಾಗಿ ಹಿಂಸಾತ್ಮಕ ರೀತಿಯಲ್ಲಿ  ಜಾನುವಾರುಗಳನ್ನು ಬೆಳಗಾವಿಯಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಐದು ಕೋಣಗಳನ್ನು ಹಾಗೂ ಒಂದು ಆಕಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಮಹೇಂದ್ರ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಹಟ್ಟಿ ಆಲೂರಿನಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ೬೩ ಮೇಲೆ ಪಟ್ಟಣದ ಜೈ ಕರ್ನಾಟಕ ವೆಲ್ಡಿಂಗ್ ಗ್ಯಾರೇಜು ಬಳಿ ಪಿಕಪ್ ವಾಹನ ಹಾಗೂ ೮೦ ಸಾವಿರರೂ ಮೌಲ್ಯದ ಜಾನುವಾರುಗಳನ್ನು ಪೊಲೀಸರು ವಶಕ್ಜೆ ಪಡೆದಿದ್ದಾರೆ. ಆರೊಪಿಗಳಾದ ತಿರುಮಲ ನಾಯಕ ಭಟ್ಕಳ,ರಮೇಶ ರಾಮಪ್ಪ ನೇಗನಾಳ ಕಣಗಾಂವ್ ಬೆಳಗಾವಿ, ಗಂಗಪ್ಪ ನಿಂಗಪ್ಪ ಟೊನ್ನಿ ಗೋಕಾಕ್, ಶಿವರಾಯಪ್ಪ ಶಿವ ಗುಂಡಪ್ಪ ಪಾಟೀಲ್ ಗೋಕಾಕ,ಇವರ ವಿರುದ್ದ ಪಿಎಸೈ ಸಿದ್ದು ಗುಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top