Slide
Slide
Slide
previous arrow
next arrow

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

300x250 AD

ಹೊನ್ನಾವರ: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಕವಲಕ್ಕಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಹಡಿನಬಾಳದ ಕಳಲೆಕೇರಿಯ ಕೃಷ್ಣ ಶೆಟ್ಟಿ (೭೦) ಮೃತಪಟ್ಟ ವ್ಯಕ್ತಿ. ಅವರು ಹೊನ್ನಾವರ ಸಂತೆ ಮಾರುಕಟ್ಟೆಗೆ ಹೋಗಿ ವಾಪಸ್ ಹಡಿನಬಾಳಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಹೊನ್ನಾವರದಿಂದ ಗೇರುಸೊಪ್ಪಾಗೆ ಸಾಗುತ್ತದ್ದ ಬಸ್ಸಿನಲ್ಲಿ ಹೋಗುತ್ತಿದ್ದಗ ಕವಲಕ್ಕಿಯಲ್ಲಿ ಅವರಿಗೆ ಹೃದಯಾಘಾತ ಉಂಟಾಗಿದೆ. ಸಹಪ್ರಯಾಣಿಕರಿಂದ ವಿಷಯ ಗೊತ್ತಾಗಿ ಬಸ್ಸು ನಿಲ್ಲಿಸಿದ್ದಾರೆ. ಹ್ರದಯಾಘಾತಗೊಂಡ ವ್ಯಕ್ತಿಯನ್ನು ನೋಡಿದ ಬಸ್ ಚಾಲಕ ಮೋಹನ ನಾಯ್ಕ ಪ್ರಯಾಣಿಕರನ್ನು ಮನವೊಲಿಸಿ ಅವರನ್ನು ಕವಲಕ್ಕಿಯಲ್ಲಿಯೇ ಇಳಿಸಿ ಹೃದಯಾಘಾತದಿಂದ ಬಳಲುತ್ತಿದ್ದ ಕೃಷ್ಣ ಶೆಟ್ಟಿ ಅವರನ್ನು ನೇರವಾಗಿ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಒಯ್ದಿದ್ದಾರೆ. ತಕ್ಷಣ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತಾದರೂ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಂತರ ಅವರ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top