Slide
Slide
Slide
previous arrow
next arrow

ಹುಲೇಕಲ್ ನಲ್ಲಿ ವಿಶಿಷ್ಟ ಪ್ರಯೋಗ; ಭಾಷೆ ಭಾವಯಾನ

300x250 AD

ಶಿರಸಿ: ಪಠ್ಯದೊಳಗಿನ ಸಂಗತಿಯನ್ನೇ ಇಟ್ಟುಕೊಂಡು ಭಾಷೆ ಭಾವಯಾನ ಎಂಬ ವಿಶಿಷ್ಟ, ವಿಶೇಷ ಉಪನ್ಯಾಸ ಕಾರ್ಯಕ್ರಮವು ತಾಲೂಕಿನ ಹುಲೇಕಲ್ ಶ್ರೀದೇವಿ ಶಿಕ್ಷಣ ಸಂಸ್ಥೆಯ ಪಿಯು ಕಾಲೇಜಿನಲ್ಲಿ ಆ.5ರಂದು ಬೆಳಿಗ್ಗೆ 10ರಿಂದ ನಡೆಯಲಿದೆ.

ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೇಕೈ ಈ ಕಾರ್ಯಕ್ರಮಕ್ಕೆ ಚಾಲನೆ ‌ನೀಡಿ‌ ನಡೆಸಿಕೊಡಲಿದ್ದಾರೆ. ಅತಿಥಿಗಳಾಗಿ ಉದಯವಾಣಿ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಎಂ.ಎನ್. ಹೆಗಡೆ  ವಹಿಸಿಕೊಳ್ಳಲಿದ್ದಾರೆ. ಭಾಷಾ ಭಾವಯಾನದಲ್ಲಿ ಯಕ್ಷಗಾನದ ಪದ್ಯಗಳ ಬಳಕೆ ಕೂಡ ಆಗಲಿದ್ದು, ಭಾಗವತ ಗಜಾನನ ಭಟ್ಟ ತುಳಗೇರಿ, ಶ್ರೀಪಾದ ಭಟ್ಟ‌ ಮೂಡಗಾರ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಾಚಾರ್ಯ ಡಿ.ಆರ್.ಹೆಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top