ಸಿದ್ದಾಪುರ: ತಾಲೂಕಿನ ಹಂಗಾರಖಂಡ ಸುತ್ತಮುತ್ತಲಿನ ನಾಗರಿಕರು ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಹಂಗಾರಖಂಡ ಇವರ ನೇತೃತ್ವದಲ್ಲಿ ತ್ಯಾಗ್ಲಿಯಿಂದ ಹಂಗಾರಖಂಡ-ಸಾಸ್ಮೆಕಟ್ಟೆ( ಗವಿನಗುಡ್ಡ-ಹಂಗಾರಖಂಡ ಪ್ರಾಥಮಿಕಶಾಲೆ) ಹಾಗೂ ಇಡುಕೈವರೆಗೆ ಶ್ರಮದಾನದ ಮೂಲಕ ರಸ್ತೆ ಅಕ್ಕಪಕ್ಕ ಇರುವ ಗಿಡಗಂಟೆಗಳನ್ನು ತೆರವುಗೊಳಿಸಿ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲಮಾಡಿಕೊಂಡರು. ಗ್ರಾಮದ ಸುಮಾರು 40ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಶ್ರಮದಾನದ ಮೂಲಕ ರಸ್ತೆ ಸ್ವಚ್ಛತೆ
