Slide
Slide
Slide
previous arrow
next arrow

ನವೋದಯಕ್ಕೆ ಗಣೇಶ ಹಿಚಡಕರ  ಆಯ್ಕೆ

300x250 AD

ಜೋಯಿಡಾ: ಜೋಯಿಡಾ ತಾಲೂಕಿನ ರಾಮನಗರ ಶಾಲೆಯ ವಿದ್ಯಾರ್ಥಿ ಗಣೇಶ ರಾಮಾ ಹಿಚಡಕರ  2024 -25  ನೇ ಸಾಲಿನ ನವೋದಯ 6 ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ  ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಆಯ್ಕೆಯಾಗಿದ್ದಾನೆ.

    ಸೌರಾಷ್ಟ್ರ ಕೋಚಿಂಗ್ ವಿದ್ಯಾ ಸಂಸ್ಥೆಯಿಂದ ಭೀಮಣ್ಣ ಹೋಳಿ ಎಂಬುವವರ ಬಳಿ ತರಬೇತಿ ಪಡೆದ ಈತ ಹೆಚ್ಚಿನ ಅಭ್ಯಾಸದಿಂದ ಹಾಗೂ ಕಠಿಣ ಪರಿಶ್ರಮದಿಂದ ಪರೀಕ್ಷೆಯಲ್ಲಿ ಪಾಸಾಗಿದ್ದಾನೆ.

   ಭೀಮಣ್ಣ ಹೋಳಿ ಇವರು ಮೂಲತಃ ವಿಜಯಪುರ ಜಿಲ್ಲೆಯವರಾಗಿದ್ದು ರಾಮನಗರದಲ್ಲಿ ಬಡ ಮಕ್ಕಳ ಸಲುವಾಗಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ  ಕೋಚಿಂಗ್ ಸೆಂಟರ್ ತೆಗೆದು ವಿದ್ಯಾರ್ಥಿಗಳಿಗೆ ಸಹಾಯಕಾರಿಯಾಗಿದ್ದಾರೆ.

300x250 AD

   ಗಣೇಶ ಹಿಚಡಕರ ಸಾಧನೆಗೆ ಜೋಯಿಡಾ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿ ಬಶೀರ್ ಅಹಮ್ಮದ್ ಹಾಗೂ ಶಿಕ್ಷಕರಾದ ಶಂಕರ ಡವಳಗಿ, ರವಿಚಂದ್ರ ಕುಮಟಾ , ವಿದ್ಯಾ ಶಂಕರ್ ನಾಯ್ಕ,ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯೆಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top