• Slide
    Slide
    Slide
    previous arrow
    next arrow
  • ಮನೆ ಛಾವಣಿ ಕುಸಿದು ವ್ಯಕ್ತಿಯ ತಲೆಗೆ ಗಾಯ

    300x250 AD

    ಕುಮಟಾ : ತಾಲೂಕಿನಲ್ಲಿ ಮಳೆ ಕಡಿಮೆಯಾದರೂ ಮಳೆಯ ಅವಘಡಗಳು ಮುಂದುವರೆದಿದ್ದು, ಮಂಗಳವಾರ ಕಲಭಾಗದಲ್ಲಿ ಮನೆಯ ಛಾವಣಿಯೊಂದು ಕುಸಿದು ಮನೆಯಲ್ಲಿದ್ದ ವ್ಯಕ್ತಿಗೆ ತಲೆಗೆ ಪೆಟ್ಟುಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ‌.

    ತಾಲೂಕಿನ ಕಲಭಾಗದಲ್ಲಿ ರಾಧಾ ಕೃಷ್ಣ ಭಂಡಾರಿಯವರ ಮನೆಯ ಛಾವಣಿಯು ಭಾಗಶಃ ಕುಸಿದು ಹಾನಿ ಸಂಭವಿಸಿದೆ. ಮನೆಯ ಕೋಣೆಯಲ್ಲಿದ್ದ ರಾಧಾ ಅವರ ಪುತ್ರ ನೀಲೇಶ ಕೃಷ್ಣ ಭಂಡಾರಿ ಅವರ ತಲೆ ಮೇಲೆ ಹೆಂಚು ಬಿದ್ದ ಪರಿಣಾಮ ತಲೆಗೆ ಗಾಯವಾಗಿದ್ದು ಗಾಯಗೊಂಡ ನೀಲೇಶನನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಛಾವಣಿ ಕುಸಿತದಿಂದ ಅಂದಾಜು 50 ಸಾವಿರ ರೂ. ಹಾನಿ ಉಂಟಾಗಿರುವುದೆಂದು ಅಂದಾಜಿಸಲಾಗಿದೆ. 

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top