• Slide
    Slide
    Slide
    previous arrow
    next arrow
  • TRCಯಲ್ಲಿ ರಾಮಕೃಷ್ಣ ಹೆಗಡೆ ಗೆಲುವಿಗೆ ಯುವ ಮುಂದಾಳು ದೀಪಕ್ ದೊಡ್ಡೂರ್ ಹರ್ಷ

    300x250 AD

    ಶಿರಸಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (TRC)ಯ ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಹಿರಿಯ ಸಹಕಾರಿ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಮತ್ತು ಅವರ ಬಳಗದಿಂದ ಸ್ಪರ್ಧಿಸಿ ವಿಜಯಶಾಲಿಯಾಗಿರುವ ನೂತನ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ರಾಜದೀಪ ಸೌಹಾರ್ದ ಸಹಕಾರಿಯ ಅಧ್ಯಕ್ಷ ದೀಪಕ ಹೆಗಡೆ ದೊಡ್ಡೂರು ಹೇಳಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಹಕಾರಿ ತತ್ವಕ್ಕೆ ಬದ್ಧರಾಗಿ ಜನರ ಕಷ್ಟಗಳಿಗೆ ಸ್ಪಂದಿಸಿ ಸಹಾಯ ಹಸ್ತ ಚಾಚುವ ರಾಮಕೃಷ್ಣ ಹೆಗಡೆ ಕಡವೆಯವರದ್ದು ಧೀಮಂತ ವ್ಯಕ್ತಿತ್ವ. ಈ ಚುನಾವಣೆಯಲ್ಲಿ ಅವರ ಗೆಲುವು ಜನರು ಅವರ ಮತ್ತು ಅವರ ಕುಟುಂಬದ ಮೇಲೆ ಇಟ್ಟಿರುವ ನಂಬಿಕೆ-ವಿಶ್ವಾಸದ ಪ್ರತೀಕವಾಗಿದೆ. ಯುವ ಸಹಕಾರಿಗಳಿಗೆ ಕಡವೆಯವರು ಆದರ್ಶವಾಗಿದ್ದಾರೆ. ಅವರು ಇನ್ನಷ್ಟು ಜನಪರ, ರೈತಪರ ವಿಚಾರಗಳ ಮೂಲಕ ಯೋಜನೆ ರೂಪಿಸುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top