Slide
Slide
Slide
previous arrow
next arrow

ರೈಲು ಬಡಿದು ಯುವಕ ಸಾವು

300x250 AD

ಕಾರವಾರ:ಅಂಕೋಲಾ ತಾಲೂಕಿನ ಹಾರವಾಡದ ರೈಲ್ವೆ ನಿಲ್ದಾಣದ ಬಳಿ ರೈಲು ಬಡಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಹಾರವಾಡದ ಮೇಲಿನಕೇರಿಯ ನಿವಾಸಿ ಮನೋಹರ್ ಗಣಪತಿ ಗೌಡ (27) ಮೃತಪಟ್ಟ ವ್ಯಕ್ತಿಯಾಗಿದ್ದು ಈತ ರೈಲ್ವೆ ಹಳಿ ಬದಿಯಿಂದ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಮುಂಬಯಿಂದ ಮಂಗಳೂರಿಗೆ ತೆರಳುತ್ತಿದ್ದ ಮತ್ಸಗಂಧಾ ಮಂಗಳೂರು ಸ್ಪೇಷಲ್ ರೈಲು ಬಲಭಾಗದ ಬುಜಕ್ಕೆ ತಗುಲಿದ್ದು ಸ್ಥಳದಲ್ಲೇ ಬಿದ್ದ ವ್ಯಕ್ತಿ ತಲೆಗೆ ಮಾರಣಾಂತಿಕ ಗಾಯಗೊಂಡು ಸಾವನ್ನಪ್ಪಿದ್ದಾನೆ. ಘಟನೆ ನಡೆದ ಬಳಿಕ ರೈಲ್ವೆ ನಿಲ್ದಾಣದ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅಂಕೋಲಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top