Slide
Slide
Slide
previous arrow
next arrow

ನೀಲಗೋಡ ಯಕ್ಷಿ ಚೌಡೇಶ್ವರಿ ದೇವಾಲಯದಲ್ಲಿ ತೀರ್ಥಸ್ನಾನ, ವಿವಿಧ ಧಾರ್ಮಿಕ ಕಾರ್ಯಕ್ರಮ

300x250 AD

ಹೊನ್ನಾವರ : ಜಿಲ್ಲೆಯ ಪ್ರಸಿದ್ಧ ದೇವಿ ಕ್ಷೇತ್ರದಲ್ಲೊಂದಾದ ತಾಲೂಕಿನ ಬಳ್ಕೂರ ಗ್ರಾಮದ ನೀಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವಿ ದೇವಾಲಯದಲ್ಲಿ ಪ್ರತಿ ಅಮವಾಸ್ಯೆಯಂದು ನವಚಂಡಿ ಹೋಮ ತೀರ್ಥ ಸ್ನಾನ ನಡೆಯುತಿದ್ದು, ಶನಿವಾರ ಯುಗಾದಿ ಅಮವಾಸ್ಯೆ ಹಿನ್ನಲೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ತೀರ್ಥ ಸ್ನಾನದಲ್ಲಿ ಪಾಲ್ಗೊಂಡು ಕೃತಾರ್ಥರಾದರು.

ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಡೆಯುವ ದರ್ಶನದಲ್ಲಿ ದೇವಿ ಸೂಚಿಸಿದ ಸೂಚನೆಯಂತೆ ಭಕ್ತರು ಅಮವಾಸ್ಯೆಯಂದು ತೀರ್ಥ ಸ್ನಾನ ಮಾಡುತ್ತಾರೆ, ಪ್ರಧಾನ ಅರ್ಚಕರಾದ ಮಾದೇವ ಸ್ವಾಮೀಯವರ ಮಾರ್ಗದರ್ಶನದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ, ಭಕ್ತರಿಗಾಗಿ ವಿಶೇಷ ಪ್ರಾರ್ಥನೆಗಳು ನಡೆಯುತ್ತದೆ.

ಇಲ್ಲಿನ ಸತ್ಯ ದೇವತೆಯ ಬಳಿ ನನ್ನ ಕೆಲಸ ಮಾಡಿಕೋಡಿ ನಿನಗೆ ಎರಡು ಘಂಟೆ ಬಾಳೆಗೊನೆ ಕೊಡುತ್ತೇನೆ ಎಂದು ಹರಕೆ ಕಟ್ಟಿಕೊಂಡರೆ, ತಕ್ಷಣ ಪರಿಹಾರ ನೀಡಿರುವ ಎಷ್ಟೋ ಉದಾಹರಣೆ ಕ್ಷೇತ್ರದಲ್ಲಿ ಕಾಣಸಿಗುತ್ತದೆ, ಇಲ್ಲಿ ಸತ್ಯ ದೇವತೆಯಲ್ಲಿ ಹರಕೆ ಮಾಡಿಕೊಂಡ ನೂರಾರು ಭಕ್ತರು ಬಾಳೆಗೋನೆ ಪೂಜೆ ಸಲ್ಲಿಸುತ್ತಿರುವುದೆ ಸಾಕ್ಷಿಯಾಗಿದೆ.

ಇಲ್ಲಿಗೆ ಪ್ರತಿನಿತ್ಯ ಮದುವೆ ಆಗದವರು, ವಿದ್ಯಾರ್ಥಿಗಳು, ಮಕ್ಕಳಾಗದವರು, ಸಾಲಬಾಧೆ ಆರೋಗ್ಯ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳಿಗಾಗಿ ರಾಜ್ಯದ ಮೂಲೆ ಮೂಲೆಯಿಂದ ಬಂದು ಪ್ರಾರ್ಥಿಸುತ್ತಾರೆ. ರಾಜ್ಯ ಅಷ್ಟೆ ಅಲ್ಲದೆ ಹೊರ ರಾಜ್ಯದಿಂದಲು ಇಲ್ಲಿಗೆ ಬರುತ್ತಾರೆ. ಅಮವಾಸ್ಯೆಯ ದಿನದಂದು ತೀರ್ಥ ಸ್ಥಾನ ವಿಷೇಶವಾಗಿದೆ. ಇಲ್ಲಿ ಪ್ರತಿನಿತ್ಯ ಅನ್ನ ಸಂತರ್ಪಣೆ ನಡೆಯುತ್ತದೆ. ಪ್ರತಿ ಅಮವಾಸ್ಯೆಯಂದು ತೀರ್ಥಸ್ನಾನ, ಪ್ರತಿ ಸಂಕಷ್ಟಿಯಂದು ಭಕ್ತರ ಸಂಕಷ್ಟ ನಿವಾರಣೆಗಾಗಿ ಗಣಹೋಮ ನಡೆಯುತ್ತದೆ.

300x250 AD

ದೇವಾಲಯದಲ್ಲಿ ಪ್ರತಿ ಅಮವಾಸ್ಯೆಯಂದು ಲೋಕ ಕಲ್ಯಾಣಾರ್ಥವಾಗಿ ನವ ಚಂಡಿಕಾಯಾಗವು ಮಾದೇವ ಸ್ವಾಮೀಯವರ ಮುಂದಾಳತ್ವದಲ್ಲಿ ವೈದಿಕರ ಮೂಲಕ ನಡೆಯುತ್ತದೆ. ಪ್ರತಿ ಅಮವಾಸ್ಯೆಯಂದು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ನವಚಂಡಿಕಾ ಯಾಗ ತಿರ್ಥಸ್ನಾನದಲ್ಲಿ ಪಾಲ್ಗೊಂಡು ಪುನಿತರಾಗುತ್ತಾರೆ,

ಬುಧವಾರ ಅಮವಾಸ್ಯೆಯ ಹಿನ್ನಲೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ದೇವಿಗೆ ಉಡಿಸೇವೆ, ತುಪ್ಪದದೀಪ ಸೆವೆ, ಹೂವಿನ ಅಲಂಕಾರ ಸೇವೆ, ಹಣ್ಣುಕಾಯಿ ಸೇವೆ, ಅನ್ನದಾನ ಸೇವೆ, ನವ ಚಂಡಿಕಾ ಸೇವೆ, ಸಲ್ಲಿಸಿದರು. ದೇವಾಲಯದಲ್ಲಿ ವಿವಿದ ದಾರ್ಮಿಕ ಕಾರ್ಯಕ್ರಮಗಳು ಅನ್ನಸಂತರ್ಪಣೆ ನಡೆದವು, ಸಾವಿರಾರು ಸಂಖೆಯಲ್ಲಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ತಿರ್ಥ ಸ್ನಾನದಲ್ಲಿ ಪಾಲಗೋಂಡು ದೇವರ ದರ್ಶನ ಪಡೆದರು.

Share This
300x250 AD
300x250 AD
300x250 AD
Back to top