ಶಿರಸಿ: ತಾಲೂಕಿನ ಇಸಳೂರಿನ ಶ್ರೀನಿಕೇತನ ಶಾಲೆಯಲ್ಲಿ ಜೂ.16, ಸೋಮವಾರದಂದು 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಶಾಲೆಯ ಸ್ಕೌಟ್ಸ್- ಗೈಡ್ಸ್ ಘಟಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆಸಲಾದ ಈ ಕಾರ್ಯಕ್ರಮಕ್ಕೆ ಶಿರಸಿಯ ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ. ಭಾಗ್ಯಲಕ್ಷ್ಮಿ, ಡಾ. ಭಾಗ್ಯಶ್ರೀ ಹಾಗೂ ಆಕಾಶ ಬೀಡಿಮಠ ಆಗಮಿಸಿದ್ದರು. ಗಣ್ಯರು ಮಾತನಾಡಿ ಯೋಗಾಸನಗಳು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಉತ್ಸಾಹವನ್ನು ತುಂಬಿ ಅವರನ್ನು ದೈಹಿಕ ಮತ್ತು ಮಾನಸಿಕ ರೂಪದಲ್ಲಿ ಬಲಿಷ್ಠರನ್ನಾಗಿಸಲು ಸಹಾಯಕವಾಗಿದ್ದು, ಇವುಗಳನ್ನು ಪ್ರತಿದಿನವು ಅಭ್ಯಸಿಸಬೇಕೆಂದು ಸಲಹೆ ನೀಡಿದರು. ಹಾಗೂ ಈ ಸಂದರ್ಭದಲ್ಲಿ ಯೋಗಶಿಕ್ಷಕಿ ಶ್ರೀಮತಿ ಶ್ಯಾಮಲಾ ಹೆಗಡೆ ಇವರ ಮಾರ್ಗದರ್ಶನದಲ್ಲಿ ಮಕ್ಕಳು ಅನೇಕ ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿದರು. ಅನಂತರ ಸ್ಕೌಟ್ಗೈಡ್ಸ್ ವಿದ್ಯಾರ್ಥಿಗಳಾದ ತೇಜಸ್, ಜಗದೀಶ, ಪ್ರಾರ್ಥನಾ ಹಾಗೂ ಮೇಘನಾ ಮಾತನಾಡಿ, ನಮ್ಮ ಜೀವನದಲ್ಲಿ ಯೋಗಾಸನದ ಮಹತ್ವ, ಯೋಗಾಸಕ್ತಿಯನ್ನು ಬೆಳೆಸಿಕೊಳ್ಳುವ ರೀತಿ ಹಾಗೂ ಅವುಗಳ ನಿರಂತರ ಅಭ್ಯಾಸದಿಂದ ಏಕಾಗ್ರತೆ ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ತಮ್ಮ ಅನಿಸಿಕೆಗಳನ್ನು ಭಾಷಣದ ಮೂಲಕ ಎಲ್ಲರೊಂದಿಗೆ ಹಂಚಿಕೊಂಡರು.
ಶ್ರೀನಿಕೇತನ ಶಾಲೆಯಲ್ಲಿ ಯೋಗ ದಿನಾಚರಣೆ
