ಶಿರಸಿ: ಹುಬ್ಬಳ್ಳಿಯ ವಾಸವಿ ಮಹಲ್ ನಲ್ಲಿ ನಡೆದ ಆಲ್ ಇಂಡಿಯಾ ಒಪನ್ ಇನ್ವಿಟೇಷನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶಿರಸಿಯ ಶೋಟೊಕಾನ್ ಕರಾಟೆ ಅಸೋಸಿಯೇಷನ್ ತಂಡದವರು ಎಲ್ಲಾ ವಿಭಾಗದಲ್ಲಿಯೂ ಪ್ರಶಸ್ತಿ ಗೆಲ್ಲುವ ಮೂಲಕ ಟೀಮ್ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶೋಟೊಕಾನ್ ಕರಾಟೆ ಅಸೋಸಿಯೇಷನ್ ವಿದ್ಯಾರ್ಥಿಗಳಾದ ಸುನೈನ್ ಶೆಟ್ಟಿ, ರಷ್ಮಿ ಶೆಟ್ಟಿ, ಶ್ರೀಲಕ್ಷ್ಮೀ ಹೆಗಡೆ, ದಿಶಾ ರಾಥೋಡ, ಸಂಧೀಪ ನಾಯ್ಕ, ಅಮರ ಸಿರ್ಸಿಕರ್, ಸಂದೇಶ ಪಾಟಿಲ್, ಚಂದನ ಗೌಡಾ, ತೇಜಸ್ ಗೌಡಾ, ದಕ್ಚ ರಾಥೋಡ, ತುಷಾರ ರೇವಣಕರ್, ಸೂರ್ಯಕಾಂತ, ಆಯುಷ್ ನಾಯ್ಕ, ಶ್ರೇಯಾ ನಾಯ್ಕ, ತೇಜಸ್ ಸಿ, ಪ್ರಾರ್ಥನಾ ಹೆಗಡೆ, ಪೂರ್ವಿ ಬಾಂದೇಕರ್ ಹಾಗು ಮುಖ್ಯ ಶಿಕ್ಷಕ ಬಿ ಎಸ್ ಸುರಜ್ ಮತ್ತು ಶಿಕ್ಷಕ ಪ್ರಕಾಶ ನಾಯ್ಕ ಭಾಗವಹಿಸಿದ್ದರು.