ಶಿರಸಿ: ತಾಲೂಕಿನ ಹಲಸಿನಕೈ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ನವಚಂಡಿಕಾ ಯಾಗ ನಡೆಯಿತು.
ಧರ್ಮದರ್ಶಿ ಅಣ್ಣಪ್ಪ ನಾಯ್ಕ ಅವರ ಮಾರ್ಗದರ್ಶನದಲ್ಲಿ ನಡೆದ ಯಾಗದ ಅದ್ವರ್ಯವನ್ನು ಗಣೇಶ ಭಟ್ ಕಾರಗದ್ದೆ ವಹಿಸಿದ್ದರು ರಮಾಕಾಂತ ನಾಯ್ಕ ನಕ್ಷೆ ದಂಪತಿ ಯಾಜಮಾನಿಕೆಯೊಂದಿಗೆ ಸೇವೆ ನೀಡಿದರು. ಧಾರ್ಮಿಕ ಮುಖಂಡ ಎ.ಜಿ ನಾಯ್ಕ ಭರಣಿ ಉಪಸ್ಥಿತರಿದ್ದು ಧರ್ಮದರ್ಶಿಗಳನ್ನು ಮತ್ತು ಯಜಮಾನ ರನ್ನು ಸನ್ಮಾನಿಸಿದರು. ನೂರಾರು ಭಕ್ತರು ಭಾಗವಹಿಸಿದ್ದರು.