• Slide
    Slide
    Slide
    previous arrow
    next arrow
  • ಅ.10 ರಂದು ‘ಗೀತಾಂಜಲಿ’ ನುಡಿನಮನ ಕಾರ್ಯಕ್ರಮ

    300x250 AD

    ಶಿರಸಿ: ನಗರದ ಕೊರೊಕೆ ಸ್ಟುಡಿಯೋದ ಸಹಯೋಗದಲ್ಲಿ  ಅ.10 ರಂದು ನಡೆಯಲಿರುವ ಎಸ್ ಬಿ ಬಾಲಸುಬ್ರಹ್ಮಣ್ಯಂ ಹಾಗೂ ನಟ, ನಿರ್ದೇಶಕ ಶಂಕರ್ ನಾಗ್ ಸ್ಮರಣಾರ್ಥ ನುಡಿನಮನ ಗೀತಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಈ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಕರೊಕೆ ಸ್ಟುಡಿಯೋದಲ್ಲಿ ಪತ್ರಕರ್ತ ರಾಜು ಕಾನಸೂರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ಕಂಡ ಅತ್ಯುನ್ನತ ಗಾಯಕ ಹಾಗೂ ದೇಶದ ಅತ್ಯುತ್ತಮ‌ ನಟ ಹಾಗೂ ನಿರ್ದೇಶಕ ನಮ್ಮ ಜಿಲ್ಲೆಯ ಶಂಕರ್ ನಾಗ್ ಅವರ ಹೆಸರಿನಲ್ಲಿ  ಈ ಕಾರ್ಯಕ್ರಮ ನಡೆಸುತ್ತಿರುವುದು ಸಂತಸದ ವಿಷಯ. ಈ ವೇದಿಕೆಯಿಂದ ಜಿಲ್ಲೆಯ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರುವಂತಾಗಲಿ ಎಂದರು.

    300x250 AD

    ವೇದಿಕೆಯಲ್ಲಿ ಪರ್ತಕರ್ತ ಪ್ರವೀಣ ಹೆಗಡೆ, ಬಿ ವಿ ಹುಲಗೇಶ, ಕರೊಕೆ ಸ್ಟುಡಿಯೋದ ಶಿರಸಿ ರತ್ನಾಕರ, ದಿವ್ಯಾ ಶೇಟ್, ಕರೋಕೆ ಸ್ಟುಡಿಯೋದ ವಿದ್ಯಾರ್ಥಿಗಳು, ಮತ್ತಿರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top