ಕುಮಟಾ: ಅರಣ್ಯ ಇಲಾಖೆಯು ಪಟ್ಟಣದ ಸರ್ಕಾರಿ ಹನುಮಂತ ಬೆಣ್ಣೆ ಕಾಲೇಜ್ ರಸ್ತೆಯಲ್ಲಿ ಗಿಡ ನೆಡುವ ಮೂಲಕ ಮಹಾತ್ಮಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು
ಶಾಸಕ ದಿನಕರ ಶೆಟ್ಟಿ ಅವರು ಅರಣ್ಯಾಧಿಕಾರಿಗಳ ಜೊತೆಗೂಡಿ ಗಿಡ ನೆಡುವ ಮೂಲಕ ಗಾಂಧಿಜೀಯವರ ಆಶಯಗಳ ಬಗ್ಗೆ ಮಾತನಾಡಿದರು . ಅಲ್ಲದೇ ಅರಣ್ಯ ರಕ್ಷಣೆ ಮತ್ತು ಹಣ್ಣು – ಹಂಪಲು ಗಿಡಗಳನ್ನು ಬೆಳೆಸುವುದರಿಂದಾಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಮಟಾ ಎಸಿಎಫ್ ಜಿ ಕೆ ಶೇಟ್ , ಕುಮಟಾ ಆರ್ಎಫ್ಒ ಪ್ರವೀಣ ನಾಯಕ , ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್ , ಪುರಸಭೆ ಸದಸ್ಯ ಸಂತೋಷ ನಾಯ್ಕ , ಹೊನ್ನಾವರದ ಪಿಡಬ್ಲುಡಿ ಎಇಇ ಸುದರ್ಶನ , ಎಇ ಸೋಮನಾಥ ಭಂಡಾರಿ, ಸರ್ಕಾರಿ ಹನುಮಂತ ಬೆಣ್ಣೆ ಕಾಲೇಜ್ ಪ್ರಾಚಾರ್ಯ ಸತೀಶ ನಾಯ್ಕ, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.