ಶಿರಸಿ: ಭಾರತೀಯ ಜನತಾ ಪಾರ್ಟಿ ಶಿರಸಿ ಗ್ರಾಮೀಣ ಮಂಡಲದಿಂದ ನರೇಂದ್ರ ಮೋದಿಜಿಯವರ 71ನೇ ಹುಟ್ಟು ಹಬ್ಬದ ನಿಮಿತ್ತ, ‘ಸೇವೆ ಮತ್ತು ಸಮರ್ಪಣೆ’ ಕಾರ್ಯಕ್ರಮದ ಅಡಿಯಲ್ಲಿ ಸೆ.25 ಶನಿವಾರದಂದು, ಜಾನ್ಮನೆ ಮಹಾಶಕ್ತಿ ಕೇಂದ್ರದ ಸಂಪಖಂಡದಲ್ಲಿ ‘ರಕ್ತದಾನ’ ಶಿಬಿರವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ 52 ಜನರು ರಕ್ತದಾನ ಮಾಡಿದರು. ನಂತರ ಪಂ.ದಿನದಯಾಳ್ ಉಪಾಧ್ಯಾಯರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ ಜಿಲ್ಲೆಯ ಅಧ್ಯಕ್ಷ ವೆಂಕಟೇಶ ನಾಯಕ, ಡಾಕ್ಟರ್ ಸುಮನ್ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಚಂದ್ರು ಎಸಳೆ, ಉಷಾ ಹೆಗಡೆ, ಶಿವಮೊಗ್ಗ ಜಿಲ್ಲಾ ಸಹ ಪ್ರಭಾರಿ ಆರ್.ಡಿ.ಹೆಗಡೆ, ಗ್ರಾಮೀಣ ಮಂಡಲದ ಅಧ್ಯಕ್ಷ ಎನ್.ವಿ.ಹೆಗಡೆ, ಪರಿಸರ ಸ್ನೇಹಿ ಕಾರ್ಯದ ಜಿಲ್ಲಾ ಸಂಚಾಲಕ ನಾಗರಾಜ ನಾಯಕ ತೊರ್ಕೆ, ಪಂಡಿತ್ ದಿನದಯಾಳ್ ಉಪಾಧ್ಯಾಯರ ಜಯಂತಿಯ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಎಮ್.ಜಿ.ಭಟ್, ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿ ರಘುಪತಿ ಹೆಗಡೆ, ರಮೇಶ್ ನಾಯ್ಕ್, ಸದಾನಂದ್ ಭಟ್, ರಕ್ತದಾನ ಶಿಬಿರದ ತಾಲೂಕ ಸಂಚಾಲಕ ಸತೀಶ ನಾಯ್ಕ್ ಔಢಾಳ ಹಾಗೂ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು ಉಪಸ್ಥಿತರಿದ್ದರು.