ಶಿರಸಿ: ನಗರದ ಅಜಿತ ಮನೋಚೇತನಾ ವಿಕಾಸ ಶಾಲೆಯಲ್ಲಿ ಸೆ.29 ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕರಕುಶಲ ಅಭಿವೃದ್ಧಿ ನಿಗಮದ ನಿವೃತ್ತ ಅಧಿಕಾರಿ ಜಗದೀಶ ಅಜಿತ ಮನೋಚೇತನಕ್ಕೆ ಒಂದು ಲಕ್ಷ ರೂ ದೇಣಿಗೆ ನೀಡಿದರು.
ನಿರಂತವಾಗಿ ಅಂಗವಿಕಲರ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಕಾರ್ಯಕರ್ತರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಉದಯ ಸ್ವಾದಿ ಮಾತನಾಡಿ `’ಸಮಾಜದ ಬೆಂಬಲವೇ ನಮ್ಮ ಶಕ್ತಿ” ಎಂದರು. ಅಜಿತಮನೋಚೇತನಾ ಅಧ್ಯಕ್ಷ ಸುಧೀರ ಭಟ್ ಅಧ್ಯಕ್ಷತೆ ವಹಿಸಿ ದಾನಿಗಳಿಗೆ ಧನ್ಯವಾದ ನೀಡಿದರು. ವಿ.ಪಿ ಹೆಗಡೆ, ಜ್ಯೋತಿ ಭಟ್ಟ ಮುಂತಾದವರು ಪಾಲ್ಗೊಂಡರು.