ಹೊನ್ನಾವರ: ತಾಲೂಕಿನ ಪ್ರಶಿದ್ಧ ಶಕ್ತಿ ಕ್ಷೇತ್ರ ಕಾನಗೋಡು ಶ್ರೀ ಚೆನ್ನಕೇಶವ ದೇವಾಲಯದ ಕಾಣಿಕೆ ಹುಂಡಿ ಕಳ್ಳತನ ಮಾಡಿದ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 69ರಿಂದ ಅಂದಾಜು ಎರಡು ಕಿಲೋಮೀಟರ್ ದೂರದಲ್ಲಿರುವ ಜಳವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಾನಗೋಡಿನ ಚೆನ್ನಕೇಶವ ದೇವಾಲಯದಲ್ಲಿ ಕಾಣಿಕೆ ಹುಂಡಿ ಕಳುವಾಗಿದೆ. ದೇವಸ್ಥಾನದ ಆವಾರದಲ್ಲೇ ಇದ್ದ ಕಾಣಿಗೆ ಹುಂಡಿಗೆ ಚೋರರು ಕನ್ನ ಹಾಕಿದ್ದಾರೆ. ಅಂದಾಜು 50 ಸಾವಿರಕ್ಕೂ ಹೆಚ್ಚು ಹಣ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅದರಲ್ಲಿ ಒಂದು ದೊಡ್ಡ ಘಂಟೆಯನ್ನು 1947 ರಲ್ಲಿ ದೇಶ ಸ್ವಾತಂತ್ರ್ಯವನ್ನು ಮರಳಿ ಗಳಿಸಿದ ಸವಿನೆನಪಿಗಾಗಿ ಜಲವಳ್ಳಿ ಗ್ರಾಮಸ್ಥರು ದೇವಾಲಯಕ್ಕೆ ನೀಡಿದ ಸವಿ ನೆನಪಿನ ಕಾಣಿಕೆಯಾಗಿತ್ತು ಎನ್ನಲಾಗಿದೆ. ಸಿ. ಪಿ. ಐ ಶ್ರೀಧರ್ ಎಸ್. ಆರ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.